CrimeDistricts

ಆರೋಗ್ಯ ಸಚಿವರ ಹುಟ್ಟೂರಲ್ಲಿ ಕಳ್ಳರ ಕಾಟ; ಪೊಲೀಸ್‌ ಮನೆಯಲ್ಲೇ ದರೋಡೆ..!!

ಚಿಕ್ಕಬಳ್ಳಾಪುರ; ಆರೋಗ್ಯ ಸಚಿವ ಡಾ.ಸುಧಾಕರ್‌ ಅವರ ಹುಟ್ಟೂರಲ್ಲಿ ವಾಸವಿರುವ ಪೊಲೀಸ್‌ ಅಧಿಕಾರಿಯಲ್ಲೇ ಮನೆಯಲ್ಲೇ ದರೋಡೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೇಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಎಎಸ್‌ಐ ನಾರಾಯಣಸ್ವಾಮಿ ಹಾಗೂ ಅವರ ಮಗ ಶರತ್‌ ಮೇಲೆ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಎಎಸ್‌ಐ ನಾರಾಯಣಸ್ವಾಮಿ ಬಾಗೇಪಲ್ಲಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪೇರೇಸಂದ್ರದಲ್ಲಿ ವಾಸವಿದ್ದಾರೆ. ಕಳೆದ ರಾತ್ರಿ ಅವರ ಮನೆಗೆ ದರೋಡೆಕೋರರು ನುಗ್ಗಿದ್ದಾರೆ. ಇದನ್ನು ಅರಿತ ಎಎಸ್‌ಐ ನಾರಾಯಣ ಸ್ವಾಮಿ ಹಾಗೂ ಅವರ ಮಗ ಶರತ್‌ ಕಳ್ಳತನವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ದರೋಡೆಕೋರರು ಇಬ್ಬರ ಮೇಲೂ ಗುಂಡು ಹಾರಿಸಿದ್ದಾರೆ.

ಗಂಡು ತಗುಲಿದ್ದರಿಂದಾಗಿ ಶರತ್‌ ಹಾಗೂ ಎಎಸ್‌ಐ ನಾರಾಯಣಸ್ವಾಮಿಯವರಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Share Post