CrimeDistricts

ಬಸ್‌ನಲ್ಲಿ ಜಗಳ ತೆಗೆದ ಮಹಿಳೆಯರು; ಸಂಬಂಧಿಕರನ್ನು ಕರೆಸಿ ಡ್ರೈವರ್‌, ಕಂಡಕ್ಟರ್‌ಗೆ ಗೂಸಾ

ಬಳ್ಳಾರಿ; ಸಂಬಂಧಿಕರು ಬರುತ್ತಿದ್ದಾರೆ. ಇನ್ನೂ ಸ್ವಲ್ಪ ಹೊತ್ತು ಬಸ್‌ ನಿಲ್ಲಿಸಿ ಎಂದು ಬಸ್‌ ಹತ್ತಿದ್ದ ಇಬ್ಬರು ಮಹಿಳೆಯರು ಹೇಳಿದ್ದಾರೆ. ಸ್ವಲ್ಪ ಕಾದ ಬಸ್‌ ಚಾಲಕ ಇತರೆ ಪ್ರಯಾಣಿಕರ ಒತ್ತಾಯದ ಹಿನ್ನೆಲೆಯಲ್ಲಿ ಬಸ್‌ ಓಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಡ್ರೈವರ್‌, ಕಂಡಕ್ಟರ್‌ ಜೊತೆ ಜಗಳ ಕಾಯ್ದಿದ್ದಾರೆ. ಸಾಲದೆಂಬಂತೆ ತಮ್ಮ ಕಡೆಯವರನ್ನು ಕರೆಸಿ, ಬಸ್‌ ಚಾಲಕ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ಮಾಡಿಸಿದ್ದಾರೆ.

ಶುಕ್ರವಾರ (ಡಿ.29) ಸಂಜೆ ಕೆಎ 35 – ಎಫ್​​ 350 ನಂಬರಿನ ಕೆಎಸ್​ಆರ್​ಟಿಸಿ ಬಸ್​ ಸಂಡೂರಿನಿಂದ ಬಳ್ಳಾರಿಗೆ ಹೊರಟಿತ್ತು. ಈ ಬಸ್‌ನಲ್ಲಿ ಈ ಘಟನೆ ನಡೆದಿದೆ. ಇಬ್ಬರು ಮಹಿಳೆಯರು ಡ್ರೈವರ್‌, ಕಂಡಕ್ಟರ್‌ ಜೊತೆ ಜಗಳ ಕಾಯ್ದಿದ್ದಾರೆ. ಅನಂತರ ಬಳ್ಳಾರಿಗೆ ಸಂಬಂಧಿಕರನ್ನು ಕರೆಸಿದ್ದಾರೆ. 15-20 ಮಂದಿ ಸಂಬಂಧಿಕರು ಆಗಮಿಸಿ, ಬಸ್‌ ಡ್ರೈವರ್‌ ಹಾಗೂ ಕಂಡಕ್ಟರ್‌ ಮೇಲೆ ಹಲ್ಲೆ ಮಾಡಿದ್ದಾರೆ.

ನಿರ್ವಾಹಕ ಮಲ್ಲಿಕಾರ್ಜುನ ಹಾಗೂ ಚಾಲಕ ಪಂಪಣ್ಣ ಹಲ್ಲೆಗೊಳಗಾಗಿದ್ದಾರೆ. ಅವರನ್ನು ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ತಲೆ, ಮುಖ, ಬೆನ್ನಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಬಳ್ಳಾರಿಯ ಬ್ರೂಸ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

 

Share Post