Districts

ಪಂಚಮಸಾಲಿ ಹೋರಾಟ ಮತ್ತೆ ಚುರುಕು; ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಎಂದ ಸ್ವಾಮೀಜಿ

ದಾವಣಗೆರೆ; ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಬಿಜೆಪಿ ಸರ್ಕಾರವಿದ್ದಾಗ ದೊಡ್ಡ ಹೋರಾಟ ನಡೆದಿತ್ತು. ಪಂಚಮಸಾಲಿ ಗುರುಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೆಂಗಳೂರಿನಲ್ಲಿ ತಿಂಗಳಾನುಗಟ್ಟಲೆ ಸತ್ಯಾಗ್ರಹ ಮಾಡಿದ್ದರು. ಇದೀಗ ಮತ್ತೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ಸ್ವಾಮೀಜಿಯವರು, ಮತ್ತೆ ಮೀಸಲಾತಿ ಹೋರಾಟ ಆರಂಭಿಸಲಾಗುತ್ತದೆ.  ಶ್ರಾವಣ ಮಾಸದಲ್ಲಿ‌ಇಷ್ಟಲಿಂಗ ಪೂಜೆಯ‌ ಮೂಲಕ‌ ಹೋರಾಟ ಶುರು ಮಾಡುತ್ತೇವೆ ಎಂದು ಹೇಳಿದ್ದಾರೆ.

 

Share Post