CrimeDistricts

ಬುಲೆಟ್‌ಗೆ ಕಾರು ಡಿಕ್ಕಿ ಪ್ರಕರಣ; ಇದು ಅಪಘಾತವಲ್ಲ, ಪ್ರೇಮಕಲಹ..!

ಚಿಕ್ಕಮಗಳೂರು; ರಾಯಲ್‌ ಎನ್‌ಪೀಲ್ಡ್‌ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ ಬೈಕ್‌ನಲ್ಲಿದ್ದ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ. ಆಗಸ್ಟ್‌ 14ರ ರಾತ್ರಿ ಈ ದುರ್ಘಟನೆ ನಡೆದಿತ್ತು. ಮೊದಲಿಗೆ ಇದೊಂದು ಅಪಘಾತ ಎಂದೇ ಭಾವಿಸಲಾಗಿತ್ತು. ಆದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರೇಮಕಹಾನಿಯೊಂದು ಬಹಿರಂಗವಾಗಿದೆ.

ಚಿಕ್ಕಮಗಳೂರು ನಗರದ ಹೊರವಲಯದ ನರಿಗುಡ್ಡೇನಹಳ್ಳಿ ಸರ್ಕಲ್ ಬಳಿ ಈ ಭಯಾನಲ ಆಕ್ಸಿಡೆಂಟ್‌ ನಡೆದಿತ್ತು. ಗರ್ಲ್‌ಫ್ರೆಂಡ್‌ ವಿಚಾರವಾಗಿ ಸ್ನೇಹಿತರ ನಡುವೆ ಗಲಾಟೆಗೆ ನಡೆದಿದ್ದು, ಆತ್ಮೀಯ ಸ್ನೇಹಿತನನ್ನೇ ಕಾರಿನಿಂದ ಗುದ್ದಿಸಿ ಸಾಯಿಸಲು ಪ್ಲ್ಯಾನ್‌ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಆತ್ಮೀಯ ಸ್ನೇಹಿತರಾಗಿದ್ದ ಅಂಕಿತ್‌ ಹಾಗೂ ನಕುಲ್‌ ಹುಡುಗಿ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಈ ಬಗ್ಗೆ ಆಗಸ್ಟ್‌ 14ರ ಮಧ್ಯರಾತ್ರಿ ಮಾತುಕತೆಗೆಂದು ನಕುಲ್‌ನನ್ನು ಕರೆಸಲಾಗಿತ್ತು. ನಕುಲ್‌ ರಾಯಲ್‌ ಎನ್‌ಫೀಲ್ಡ್‌ನಲ್ಲಿ ಬಂದಿದ್ದು, ಈ ವೇಳೆ ಆತನ ಮೇಲೆ ಕಾರು ಹರಿಸಲಾಗಿದೆ. ಗುದ್ದಿದ ಕಾರು ಬೈಕ್‌ನ್ನು ನೂರು ಮೀಟರ್‌ವರೆಗೆ ಎಳೆದೊಯ್ದಿತ್ತು.

ಇದನ್ನು ನೋಡಿ ಸ್ಥಳೀಯರು ಕೂಗಿಕೊಳ್ತಿದ್ದಂತೆ ಅಂಕಿತ್‌ ಎಸ್ಕೇಪ್‌ ಆಗಿದ್ದ. ತೀವ್ರ ಗಾಯಗೊಂಡಿದ್ದ ನಕುಲ್‌ನನ್ನು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪೊಲೀಸರು ತನಿಖೆ ಶುರು ಮಾಡುತ್ತಿದ್ದಂತೆ ಆಕ್ಸಿಡೆಂಟ್‌ ಹಿಂದಿನ ಗುಟ್ಟು ಬಯಲಾಗಿದೆ.

 

Share Post