DistrictsPolitics

ಭ್ರಷ್ಟಾಚಾರ ವಿರುದ್ಧ ಹೋರಾಟ ಕಾಂಗ್ರೆಸ್‌ಗೆ ಸಹಿಸೋಕೆ ಆಗ್ತಿಲ್ಲ; ಮೋದಿ

ಕೋಲಾರ; ನಾವು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಇದರಿಂದ ಕಾಂಗ್ರೆಸ್‌ ನವರು ಹೆಚ್ಚು ತೊಂದರೆಗೊಳಗಾಗಿದ್ದಾರೆ. ಇದನ್ನು ಸಹಿಸೋದಕ್ಕೆ ಅವರಿಗೆ ಆಗ್ತಾ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮಾಡಿ ಕಾಂಗ್ರೆಸ್‌ನವರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ನಮ್ಮನ್ನು ಅವರಿಗೆ ಸಹಿಸೋದಕ್ಕೆ ಆಗ್ತಿಲ್ಲ.  ಇದರಿಂದಾಗಿಯೇ ನನಗೆ ಬೆದರಿಕೆ ಹಾಕ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವುದು ಬಿಟ್ಟು, ಹಾವು ಹಾಗೂ ಅದರ ವಿಷದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ ಎಂದು ಖರ್ಗೆಗೆ ಟಾಂಗ್‌ ಕೊಟ್ಟಿದ್ದಾರೆ.

ನನ್ನನ್ನು ವಿಷ ಸರ್ಪ ಎಂದು ಕರೆಯುವುದರಿಂದ ಯಾವುದೇ ಬೇಸರವಿಲ್ಲ. ಶಿವನ ಕೊರಳಿಗೆ ಕಳೆ ತಂದಿರುವುದು ಇದೇ ಹಾವು. ನನಗೆ ಈ ದೇಶದ ಜನರೇ ಶಿವನ ಸ್ವರೂಪ ಎಂದು ಮೋದಿ ಹೇಳಿದರು. ಶಿವನ ಸ್ವರೂಪಿಯಾದ ಜನರ ಕೊರಳಲ್ಲಿ ಹಾವಾಗಿರುವುದುದಕ್ಕೆ ನನಗೆ ಖುಷಿ ಎಂದೂ ಮೋದಿ ಇದೇ ವೇಳೆ ಹೇಳಿದ್ದಾರೆ.

Share Post