DistrictsNationalPolitics

TERRORISM; ಭಯೋತ್ಪಾದನೆಯನ್ನು ಪಾಲನೆ, ಪೋಷಣೆ ಮಾಡಿದ್ದು ಕಾಂಗ್ರೆಸ್‌; ನರೇಂದ್ರ ಮೋದಿ

ಬಳ್ಳಾರಿ; ಭಯೋತ್ಪಾದನೆಯನ್ನು ಪಾಲನೆ, ಪೋಷಣೆ ಮಾಡಿದ್ದು ಕಾಂಗ್ರೆಸ್‌. ಭಯೋತ್ಪಾದನೆ ವಿರುದ್ಧ ಕಾಂಗ್ರೆಸ್‌ ಮಾತೇ ಆಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪ ಮಾಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕ ಭಯೋತ್ಪಾದನೆಯಿಂದ ಮುಕ್ತವಾಗಬೇಕು. ಅದಕ್ಕಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ಉಗ್ರರ ವಿರುದ್ಧ ಕ್ರಮ ಕೈಗೊಂಡರೆ ಕಾಂಗ್ರೆಸ್‌ಗೆ ಹೊಟ್ಟೆ ಉರಿ. ಭಯೋತ್ಪಾದನೆಯನ್ನು ಪಾಲನೆ, ಪೋಷಣೆ ಮಾಡಿದ್ದು ಕಾಂಗ್ರೆಸ್‌ ಎಂದ ಮೋದಿ, ಉಗ್ರವಾದ ಅಭಿವೃದ್ಧಿಯ ವಿರೋಧಿ, ಮಾನವೀಯತೆಯ ವಿರೋಧಿ ಅದರ ವಿರುದ್ಧ ನಾವು ಹೋರಾಡಲೇಬೇಕು. ಕರ್ನಾಟಕದಿಂದ ಉಗ್ರವಾದ ಕಿತ್ತೊಗಲೇಬೇಕು ಎಂದು ಹೇಳಿದರು.

ಇಡೀ ಬಳ್ಳಾರಿ ಕ್ಷೇತ್ರಕ್ಕೆ ಆಂಜನೇಯ ಸ್ವಾಮಿಯ ಆಶಿರ್ವಾದವಿದೆ ಎಂದು ಮೋದಿ, ನಿನ್ನೆ ಮಳೆ ಬಂದಿದ್ದರೂ ಕೂಡಾ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದೀರಿ ನಿಮಗೆ ಧನ್ಯವಾದ ಎಂದು ಮತದಾರರಿಗೆ ತಿಳಿಸಿದರು. ಇಲ್ಲೂ ಕೂಡಾ ಬಜರಂಗಬಲಿಯ ಘೋಷಣೆ ಕೂಗಿದರು. ಕಾಂಗ್ರೆಸ್‌ ಸುಳ್ಳಿನ ಆಶ್ವಾಸನೆ ನೀಡುತ್ತಿದೆ ಅವುಗಳನ್ನು ನಂಬಬೇಡಿ ಎಂದೂ ಮೋದಿ ಹೇಳಿದರು.

Share Post