DistrictsPolitics

ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ

ಶಿವಮೊಗ್ಗ; ಬಿಜೆಪಿ ಸಮಾವೇಶದಲ್ಲಿ ತಮಿಳು ನಾಡಗೀತೆ ಪ್ರಸಾರ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಹಾಗೂ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಸಮಾವೇಶ ನಡೆಸಲಾಯಿತು. ಈ ಸಮಾವೇಶದ ಮೂಲಕ ಅಲ್ಲಿನ ತಮಿಳಿಗರನ್ನು ಸೆಳೆಯೋ ಉದ್ದೇಶವಾಗಿತ್ತು. ಇದರಲ್ಲಿ ತಮಿಳು ನಾಡಗೀತೆ ಪ್ರಸಾರ ಮಾಡಲಾಗಿದೆ.

ತಮಿಳು ನಾಡಗೀತೆ ಪ್ರಸಾರವಾಗುತ್ತಿದ್ದಂತೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಆದ್ರೆ ತಮಿಳು ನಾಡಗೀತೆ ಅರ್ಧ ಪ್ರಸಾರವಾಗೋಷ್ಟರಲ್ಲಿ ಈಶ್ವರಪ್ಪ ಎಚ್ಚೆತ್ತುಕೊಂಡಿದ್ದಾರೆ. ತಮಿಳು ನಾಡಗೀತೆಯನ್ನು ನಿಲ್ಲಿಸಿದ್ದಾರೆ. ಕೂಡಲೇ ಅವರು ಡ್ಯಾಮೇಜ್‌ ಕಂಟ್ರೋಲ್‌ ಮಾಡಿದ್ದು, ಎಲ್ಲರಿಂದ ಕನ್ನಡ ನಾಡಗೀತೆಯನ್ನು ಹಾಡಿಸಿದ್ದಾರೆ.

Share Post