CrimeDistricts

ಸಾಕ್ಷ್ಯ ಹೇಳಲು ಬಾರದ ತಹಸೀಲ್ದಾರ್‌ ಶ್ವೇತಾ ಬಂಧನಕ್ಕೆ ಆದೇಶ

ಹಾಸನ;  ಪ್ರಕರಣವೊಂದರಲ್ಲಿ ಸಾಕ್ಷ್ಯ ಹೇಳಲು ಬಾರದ ಹಾಸನ ತಹಸೀಲ್ದಾರ್‌ ವಿರುದ್ಧ ಅರೆಸ್ಟ್‌ ವಾರಂಟ್‌ ಜಾರಿ ಮಾಡಲಾಗಿದೆ. ಹಾಸನ ಸಿವಿಲ್‌ ಕೋರ್ಟ್‌ ಹಾಸನ ತಹಸೀಲ್ದಾರ್‌ ಶ್ವೇತಾ ಬಂಧನಕ್ಕೆ ಆದೇಶ ಹೊರಡಿಸಿದ್ದು, ಪೊಲೀಸರು ಶ್ವೇತಾ ಅವರ ಬಂಧನಕ್ಕೆ ಸಿದ್ಧತೆ ನಡೆಸಿದ್ದಾರೆ. ಆದ್ರೆ ಕಚೇರಿಯಲ್ಲಿ ಅವರು ಲಭ್ಯವಿಲ್ಲದಿದ್ದರಿಂದ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪ್ರಕರಣವೊಂದರಲ್ಲಿ ತಹಸೀಲ್ದಾರ್‌ ಶ್ವೇತಾ ಸಾಕ್ಷಿಯಾಗಿದ್ದರು. ಆದ್ರೆ ಹಲವು ಬಾರಿ ಅವರು ಸಾಕ್ಷ್ಯ ಹೇಳಲು ಬಾರದೆ ಹೈರಾಗಿದ್ದಾರೆ. ಸಮನ್ಸ್‌ ಕಳುಹಿಸಿದರೂ ಅದನ್ನು ಅವರು ಸ್ವೀಕಾರ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸುವಂತೆ ಹಾಸನ ಸಿವಿಲ್‌ ನ್ಯಾಯಾಲಯ ಸೂಚನೆ ಕೊಟ್ಟಿದೆ. ಆದ್ರೆ ಅವರನ್ನು ಬಂಧಿಸಲು ಹೋದಾಗ ತಹಸೀಲ್ದಾರ್‌ ಅವರು ಕಚೇರಿಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಅವರ ಬಂಧನ ಸಾಧ್ಯವಾಗಿಲ್ಲ.

 

Share Post