CrimeNational

ಮದುವೆ ಮುಗಿಸಿ ಬರುತ್ತಿದ್ದವರಿಗೆ ಯಮನ ದರ್ಶನ; 9 ಮಂದಿ ದುರ್ಮರಣ

 

ಜೈಪುರ; ಮದುವೆ ಮುಗಿಸಿ‌‌‌ ಬರುವಾಗ ಭೀಕರ ಅಪಘಾತ ನಡೆದಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ರಾಜಸ್ಥಾನದಲ್ಲಿ ಕಳೆದ ರಾತ್ರಿ ಈ ದುರಂತ ಸಂಭವಿಸಿದೆ. ಟ್ರಕ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಈ ದುರಂತ ನಡೆದಿದೆ.

   ಮಧ್ಯಪ್ರದೇಶದ ಖಿಲ್ಚಿಪುರದಲ್ಲಿ ವಿವಾಹ ಸಮಾರಂಭವಿತ್ತು. ವಿವಾಹ ಮುಗಿಸಿ ವಾಪಸ್ಸಾಗುವಾಗ ಈ ದುರಂತ ನಡೆದಿದೆ.. ಕಾರಿನಲ್ಲಿ ಹತ್ತು‌ ಜನರಿದ್ದರು.. ಇದರಲ್ಲಿ ಮೂವರು ಸ್ಥಳದಲ್ಲೇ

ಸಾವನ್ನಪ್ಪಿದ್ದಾರೆ.. ಉಳಿದ ಆರು ಮಂದಿ‌‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

  ರಾಜಸ್ಥಾನ ಜಲವಾರ್ ಬಳಿ ಈ ದುರ್ಘಟನೆ ನಡೆದಿದೆ. ಟ್ರಕ್ ಚಾಲಕ ಅಪಘಾತದ ಬಳಿಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಮಾತ್ರ ಬದಕುಳಿದಿದ್ದು, ಆಸ್ಪತ್ರೆಯಲ್ಲಿ‌‌ ಚಿಕಿತ್ಸೆ ಪಡೆಯುತ್ತಿದ್ದಾನೆ.

 

Share Post