CrimeDistricts

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ; ಅಖಾಡಕ್ಕಿಳಿದ ಒಡನಾಡಿ ಸಂಸ್ಥೆ

ಮಂಗಳೂರು; ಮರುಘಾಮಠದ ಶಿವಮೂರ್ತಿಗಳ ಅನಾಚಾರ ಪ್ರಕರಣ ಬಯಗೆಳೆದಿದ್ದ ಮೈಸೂರಿನ ಒಡನಾಡಿ ಸಂಸ್ಥೆ ಈಗ ಮತ್ತೆ ಅಖಾಡಕ್ಕಿಳಿದಿದೆ. ಧರ್ಮಸ್ಥಳದ ಸೌಜನ್ಯಾಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಹೋರಾಟಕ್ಕೆ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶುರಾಮ್‌ ಕೈಜೋಡಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸೌಜನ್ಯಾಗೆ ಸಾವಿಗೆ ನ್ಯಾಯ ದೊರಕಿಸಲು ಹೋರಾಟ ಮಾಡುತ್ತಿರುವ ಹೋರಾಟಗಾರರನ್ನು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶುರಾಮ್‌ ಭೇಟಿ ಮಾಡಿದ್ದಾರೆ.

ನಿನ್ನೆ ಸ್ಟ್ಯಾನ್ಲಿಯವರು ಸೌಜನ್ಯಾ ಪರ ಹೋರಾಟಗಾರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಧರ್ಮಸ್ಥಳದಲ್ಲಿ ನಡೆದ ಈ ಪ್ರಕರಣ ತಲೆತಗ್ಗಿಸುವಂತಹದ್ದು. ಈ ಪ್ರಕರಣ ಮರು ತನಿಖೆಯಾಗಬೇಕು ಎಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಇದಕ್ಕೆ ಒಡನಾಡಿ ಸಂಸ್ಥೆ ಸಾಥ್‌ ನೀಡಲು ಮುಂದಾಗಿದೆ. ಹೀಗಾಗಿ ಸೌಜನ್ಯಾ ಪರ ಹೋರಾಟಕ್ಕೆ ಬಲ ಬಂದಂತಾಗಿದೆ.

 

Share Post