DistrictsPolitics

ಯಾರೋ ದುಡ್ಡು ತಂದಿಟ್ಟು ಹೋದರು, ಮಗ ಅಮಾಯಕ; ಮಾಡಾಳ್‌

ದಾವಣಗೆರೆ; ಯಾರೋ ದುರುದ್ದೇಶದಿಂದ ಹೀಗೆ ಮಾಡಿದ್ದಾರೆ. ನನ್ನ ಕಚೇರಿಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಹೇಳಿದ್ದಾರೆ. ಅವರ ಸ್ವಗ್ರಾಮದಲ್ಲಿ ಮಾತನಾಡಿದ ಅವರು,
ಯಾರೋ ಇಬ್ಬರು ಬಂದು ನಮ್ಮ ಕಚೇರಿಗೆ ಹಣ ತಂದಿಟ್ಟಿದ್ದಾರೆ. ಈ ವೇಳೆ ನನ್ನ ಮಗ ಪ್ರಶಾಂತ್‌ ಸುಮ್ಮನೆ ಕುಳಿತಿದ್ದನ್ನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ.

ಯಾರೋ ಇಬ್ಬರು ಬಂದು ಕಚೇರಿಯಲ್ಲಿ ಹಣ ಇಟ್ಟು ಓಡಿಹೋಗಿದ್ದಾರೆ. ಇದೇ ವೇಳೆ ಲೋಕಾಯುಕ್ತ ಅಧಿಕಾರಿಗಳು ಬಂದು ನನ್ನ ಮಗನನ್ನು ಬಂಧಿಸಿದ್ದಾರೆ. ಈ ವೇಳೆ ನನ್ನ ಮಗ ಪ್ರಶಾಂತ್‌ ಸುಮ್ಮನೆ ಕುಳಿತಿದ್ದರು. ಮನೆಯಲ್ಲಿ ಆರು ಕೋಟಿ ರೂಪಾಯಿ ಹಣ ಸಿಕ್ಕಿದೆ. ನಾವು ಅಡಿಕೆ ಬೆಳೆಗಾರರು, ಜೊತೆಗೆ ಕ್ರಶರ್‌ ಸೇರಿ ಹಲವು ವಹಿವಾಟುಗಳಿವೆ. ಅದರಿಂದ ಬಂದ ಹಣವನ್ನು ನಾವು ಇಟ್ಟುಕೊಂಡಿರುತ್ತೇವೆ. ಅಡಿಕೆ ಬೆಳೆಗಾರರು ಐದಾರು ಕೋಟಿ ರೂಪಾಯಿ ಮನೆಯಲ್ಲಿಟ್ಟುಕೊಂಡಿರುತ್ತಾರೆ. ಹಾಗೆಯೇ ನಾವು ಇಟ್ಟುಕೊಂಡಿದ್ದೆವು. ಅದಕ್ಕೆ ಸೂಕ್ತ ದಾಖಲೆ ಸಲ್ಲಿಸಿ, ನಮ್ಮ ಹಣವನ್ನು ನಾವು ವಾಪಸ್‌ ಪಡೆದುಕೊಳ್ಳುತ್ತೇವೆ ಎಂದು ಮಾಡಾಳ್‌ ಹೇಳಿದರು.

Share Post