DistrictsLifestyle

ಅಯೋಧ್ಯೆ ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಿದ ರಾಮನಗರದ ಭಕ್ತರು

ರಾಮನಗರ; ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಮಂದಿರಕ್ಕೆ ಈಗಲೂ ದೇಣಿಗೆ ಹಾಗೂ ಕೊಡುಗೆಗಳು ಹರಿದುಬರುತ್ತಿವೆ. ರಾಮಗರದ ಭಕ್ತರು ಆಯೋಧ್ಯೆಯ ರಾಮನಿಗೆ ವಿಶೇಷವಾಗಿ ಕಾಣಿಕೆಯೊಂದನ್ನು ಅರ್ಪಣೆ ಮಾಡಿದ್ದಾರೆ. ರಾಮನಗರದಿಂದ ಬೆಳ್ಳಿ ಇಟ್ಟಿಗೆಯೊಂದನ್ನು ರಾಮಮಂದಿರಕ್ಕೆ ಸಮರ್ಪಿಸಲಾಗಿದೆ.

ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸಮ್ಮುಖದಲ್ಲಿ ಕೆಂಗಲ್ ಆಂಜನೇಯ ದೇವಾಲಯ, ರಾಮದೇವರ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ಬೆಳ್ಳಿ ಇಟ್ಟಿಗೆಯನ್ನು ರಾಮನ ಭಕ್ತರು ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ದಾರೆ. ಬಿಜೆಪಿ ಮುಖಂಡ ಗೌತಮ್ ಗೌಡ ಸೇರಿ 150 ಮಂದಿ ಭಕ್ತರು ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಸಮರ್ಪಿಸುತ್ತಿದ್ದಾರೆ.

Share Post