CrimeDistricts

ಎರಡು ಪ್ರತ್ಯೇಕ ಅಪಘಾತ; ತುಮಕೂರಿನಲ್ಲಿ ಇಬ್ಬರ ಸಾವು

ತುಮಕೂರು; ತುಮಕೂರು ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ತುರುವೇಕೆರೆ ಹಾಗೂ ತುಮಕೂರಿನ ಇಬ್ಬರು ವ್ಯಕ್ತಿಗಳು ಮೃತಪಟ್ಟವರು ಎಂದು ತಿಳಿದುಬಂದಿದೆ.

ತುರುವೇಕೆರೆ ತಾಲ್ಲೂಕಿನ ಕೊಂಡ್ಲಿಕ್ರಾಸ್ ನಿಂದ ಅಮ್ಮಸಂದ್ರ ಕಡೆಗೆ ಹೋಗುವಾಗ ಬೈಕ್‌ ಸವಾರ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಬಿ.ರಾಜು ಎಂಬುವವರೇ ಮೃತಪಟ್ಟ ಬೈಕ್‌ ಸವಾರ. ಅಶೋಕ ರೋಡ್ ಫ್ಲಾಂಟ್ ಹತ್ತಿರ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರಾಜು ಅವರು ತುರುವೇಕೆರೆ ತಾಲ್ಲೂಕಿ‌ನ ಅಮ್ಮಸಂದ್ರದ ನಿವಾಸಿಯಾಗಿದ್ದು, ಕಾರ್ಖಾನೆಯೊಂದರ ನಿವೃತ್ತ ನೌಕರನಾಗಿದ್ದಾರೆ.

ಇನ್ನೊಂದೆಡೆ ತುಮಕೂರಿನ ಬಟವಾಡಿಯ ಬಳಿ ಗುರುವಾರ ರಾತ್ರಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಹೊಡೆದಿದೆ. ಇದರಿಂದಾಗಿ ಬೈಕ್‌ ಸವಾರ ತೀವ್ರವಾಗಿ ಗಾಯಗೊಂಡಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

 

Share Post