Districts

ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ? ಅಥವಾ ಅಲ್​ ಖೈದಾ ಮುಖ್ಯಸ್ಥನೋ? ; ಈಶ್ವರಪ್ಪ ಪ್ರಶ್ನೆ

ಶಿವಮೊಗ್ಗ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿಯೋ? ಅಥವಾ ಅಲ್​ ಖೈದಾ ಮುಖ್ಯಸ್ಥನೋ?. ಇದನ್ನು ರಾಜ್ಯದ ಜನರೇ ತೀರ್ಮಾನ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ವಿಡಿಯೋಗೂ ಆರ್‌ಎಸ್‌ಎಸ್‌ಗೂ ಲಿಂಕ್‌ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅವರು ಈ ರೀತಿ ಕಿಡಿ ಕಾರಿದ್ದಾರೆ.

ಮಂಡ್ಯ ವಿದ್ಯಾರ್ಥಿನಿ ಮುಸ್ಕಾನ್‌ ಹೊಗಳಿ ಅಲ್‌ಖೈದಾ ಮುಖ್ಯಸ್ಥ ಜವಾಹಿರಿ ವಿಡಿಯೋ ಮಾಡಿದ್ದಾನೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಜವಾಹಿರಿಗೂ ಆರ್‌ಎಸ್‌ಎಸ್‌ ಲಿಂಕ್‌ ಮಾಡಿದ್ದಾರೆ. ಈಗ ಯಾರನ್ನು ದೇಶದ್ರೋಹಿ ಎಂದು ಕರೆಯಬೇಕು ಹೇಳಿ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

Share Post