DistrictsPolitics

ಕಾರು ಹತ್ತುವ ವೇಳೆ ಕುಸಿದ ಸಿದ್ದರಾಮಯ್ಯ

ವಿಜಯನಗರ; ಕಾರು ಹತ್ತುವ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕುಸಿದುಬಿದ್ದಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿಯಲ್ಲಿ ನಡೆದಿದೆ. ಇಲ್ಲಿನ ಹೆಲಿಪ್ಯಾಡ್‌ ಬಳಿ ಈ ಘಟನೆ ನಡೆದಿದ್ದು, ನಂತರ ಚೇತರಿಸಿಕೊಂಡ ಸಿದ್ದರಾಮಯ್ಯ ಪ್ರಚಾರಕ್ಕೆ ತೆರಳಿದ್ದಾರೆ.

ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಅಭ್ಯರ್ಥಿ ಎನ್‌.ಟಿ.ಶ್ರೀನಿವಾಸ್‌ ಪರವಾಗಿ ಪ್ರಚಾರ ಮಾಡಲು ಬಂದಿದ್ದರು. ಹೆಲಿಕಾಪ್ಟರ್‌  ಇಳಿದ ಮೇಲೆ ಕಾರು ಹತ್ತಲು ಹೋಗಿದ್ದಾರೆ. ಈ ವೇಳೆ ಅವರು ಕುಸಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಕಾರಿನಲ್ಲಿ ಕೂರಿಸಿದ್ದಾರೆ.

ಸ್ಥಳದಲ್ಲೇ ಇದ್ದ ವೈದ್ಯರು ಅವರಿಗೆ ಗ್ಲುಕೋಸ್‌ ನೀಡಿದ್ದು, ಕ್ಷಣದಲ್ಲೇ ಅವರು ಸುಧಾರಿಸಿಕೊಂಡಿದ್ದಾರೆ. ಅನಂತರ ಜನರತ್ತ ಕೈಬೀಸಿದ ಸಿದ್ದರಾಮಯ್ಯ, ಪ್ರಚಾರಕ್ಕೆ ತೆರಳಿದ್ದಾರೆ.

 

Share Post