CrimeDistricts

ಪ್ರವೀಣ್‌ ಕೊಲೆ ಪ್ರಕರಣ; ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಸಿ – ಪ್ರವೀಣ್‌ ಪತ್ನಿ

ದಕ್ಷಿಣ ಕನ್ನಡ; ಪ್ರವೀಣ್‌ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕೆಂದು ಪ್ರವೀನ್‌ ಪತ್ನಿ ನೂತನಾ ಅವರು ಆಗ್ರಹಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ನೂತನಾ ಅವರು, ನನ್ನ ಗಂಡ ಪ್ರವೀಣ್‌ ಸಮಾಜಕ್ಕಾಗಿ ಬದುಕಿದವರು. ಅವರ ಸಾವಿಗೆ ನ್ಯಾಯ ಸಿಗಬೇಕಿದೆ ಎಂದು ಹೇಳಿದರು.

ಸರ್ಕಾರ ಕೂಡಲೇ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರವೀನ್‌ ಪತ್ನಿ ನೂತನಾ ಆಗ್ರಹಿಸಿದರು.

Share Post