CrimeDistricts

ಹರ್ಷ ಮನೆಯವರಿಗೆ ಬೆದರಿಕೆ ಪ್ರಕರಣ; ಮೂವರನ್ನು ಅರೆಸ್ಟ್‌ ಮಾಡಿದ ಪೊಲೀಸರು

ಶಿವಮೊಗ್ಗ; ಶಿವಮೊಗ್ಗದಲ್ಲಿ ಕೆಲ ತಿಂಗಳ ಹಿಂದೆ ಕೊಲೆಯಾದ ಹಿಂದೂ ಪರ ಕಾರ್ಯಕರ್ತ ಹರ್ಷ ಅವರ ಮನೆ ಮುಂದೆ ಎರಡು ದಿನದ ಹಿಂದೆ ದುಷ್ಕರ್ಮಿಗಳು ಬಂದು ಮಚ್ಚು, ಲಾಂಗು ಝಳಪಿಸಿ ಭೀತಿ ಉಂಟು ಮಾಡಿದ್ದರು. ಅವರ ಬೆನ್ನುಬಿದ್ದ ಶಿವಮೊಗ್ಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಕೆಟ್‌ ಫೌಝನ್‌, ಅಜರ್‌ ಅಲಿಯಾಸ್‌ ಅಜ್ಜು ಹಾಗೂ ಫರಾಝ್‌ ಬಂಧಿತ ಆರೋಪಿಗಳು. ಆರೋಪಿಗಳಲ್ಲೊಬ್ಬನಾದ ಮಾರ್ಕೆಟ್‌ ಫೌಝನ್‌ ಎಂಬಾತ ಈಗಾಗಲೇ ಐದು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಇನ್ನು ಅಜರ್‌ ಅಲಿಯಾಸ್‌ ಅಜ್ಜು ವಿರುದ್ಧ ಮೂರು ಹಾಗೂ ಫರಾಜ್‌ ವಿರುದ್ಧ ನಾಲ್ಕು ಕೇಸ್‌ಗಳು ಈ ಹಿಂದೆ ದಾಖಲಾಗಿದ್ದವು ಎಂದು ತಿಳಿದುಬಂದಿದೆ.

ಸೀಗೆಹಟ್ಟಿಯ ಹರ್ಷ ನಿವಾಸದ ಬಳಿ ಎರಡು ಬೈಕ್‌ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ಲಾಂಗ್‌, ಮಚ್ಚುಗಳನ್ನು ತೋರಿಸಿ, ಹರ್ಷ ಮನೆಯವರಿಗೆ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೆ ಯುವಕನೊಬ್ಬನ ಮೇಲೆ ಕಲ್ಲು ತೂರಿ ಗಾಯಗೊಳಿಸಿದ್ದರು.

 

Share Post