CrimeDistricts

ರಾಮನಗರದಲ್ಲಿ ಜೀತ ಪದ್ಧತಿ; ಕಾರ್ಮಿಕನ ಕಾಲಿಗೆ ಸರಪಳಿ ಕಟ್ಟಿದ್ದ ಮಾಲೀಕ

ರಾಮನಗರ; ಮುಂಗಡವಾಗಿ ಹಣ ಪಡೆದುಕೊಂಡಿದ್ದ ಕಾರಣಕ್ಕೇ ಕಾರ್ಮಿಕನೊಬ್ಬ ಕಾಲಿಗೆ ಸರಪಳಿ ಕಟ್ಟಿ ಜೀತ ಮಾಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆ ಬಯಲಾಗಿದೆ. ರಾಮನಗರದ ಮೆಹಬೂಬ್‌ನಗರ ಸಿಲ್ಕ್‌ ಪ್ಯಾಕ್ಟರಿಯೊಂದರಲ್ಲಿ ಈ ಘಟನೆ ನಡೆದಿದೆ.

ಜೀತಕ್ಕಿದ್ದ ಕಾರ್ಮಿಕನನ್ನು ವಸೀಂ (24) ಎಂದು ಗುರುತಿಸಲಾಗಿದೆ. ವಸೀಂ ಕಾರ್ಖಾನೆ ಮಾಲೀಕನಿಂದ ಒಂದೂವರೆ ಲಕ್ಷ ರೂಪಾಯಿ ಮುಂಗಡವಾಗಿ ಪಡೆದಿದ್ದ. ಇದಾದ ಮೇಲೆ ಯಾವುದೋ ಕಾರಣದಿಂದ ಒಂದು ತಿಂಗಳು ಕೆಲಸಕ್ಕೆ ಹೋಗಿಲ್ಲ. ಇದರಿಂದಾಗಿ ಕಾರ್ಖಾನೆ ಮಾಲೀಕ, ವಸೀಂನನ್ನು ಹುಡುಕಿ ಕರೆತಂದು ಕಾಲಿಗೆ ಸರಪಳಿ ಕಟ್ಟಿ ಕೆಲಸ ಮಾಡಿಸುತ್ತಿದ್ದ.

ಕಾರ್ಮಿಕ ವಸೀಂ ಕಾಲಿಗೆ 9 ದಿನಗಳಿಂದ ಸರಪಳಿ ಹಾಕಲಾಗಿದೆ. ಸರಪಳಿಯೊಂದಿಗೇ ಆತ ಕೆಲಸ ಮಾಡುತ್ತಿದ್ದ. ಈ ವಿಚಾರ  ತಿಳಿದ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದಾರೆ. ವಸೀಂನನ್ನು ರಕ್ಷಣೆ ಮಾಡಿದ್ದಾರೆ.

ಈ ಸಂಬಂಧ ಕಾರ್ಖಾನೆಯ ಮಾಲೀಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್ ವಿರುದ್ಧ ಪ್ರಕರಣ ದಾಖಲಾಗಿದೆ.

Share Post