Districts

ಚಾಮುಂಡಿ ಬೆಟ್ಟಕ್ಕೆ ಚಿನ್ನಮ್ಮ ಭೇಟಿ; ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಶಶಿಕಲಾ

ಮೈಸೂರು: ಕೋರ್ಟ್‌ ಕೇಸ್‌ ಒಂದರ ಸಂಬಂಧ ಬೆಂಗಳೂರಿಗೆ ಬಂದಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್‌ ಇಂದು ಮೈಸೂರಿಗೆ ಭೇಟಿ ನೀಡಿದ್ದರು. ತಮ್ಮ ಬೆಂಬಲಿಗರೊಂದಿಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದ ಅವರು, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಚಿನ್ನಮ್ಮ ಬಂದಿರುವುದು ಗೊತ್ತಾಗುತ್ತಿದ್ದರೆ ಅವರ ಅಭಿಮಾನಿಗಳ ದೇಗುಲದ ಬಳಿ ಸೇರಿದ್ದರು. ಶಶಿಕಲಾ ಅವರು ಚಾಮುಂಡಿ ದರ್ಶನ ಮುಗಿಸಿ ಹೊರಬರುತ್ತಿದ್ದಂತೆ ಅವರವನ್ನು ಅಭಿಮಾನಿಗಳು ಸುತ್ತುವರಿದರು. ಚಿನ್ನಮ್ಮ ಚಿನ್ನಮ್ಮ ಎಂದು ಜಯಘೋಷ ಕೂಗಿದರು. ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.

Share Post