CrimeDistricts

ಚಿತ್ರದುರ್ಗ ಬಳಿ ಭೀಕರ ಅಪಘಾತ; ಕುರಿ ವ್ಯಾಪಾರಕ್ಕೆ ಹೋಗುತ್ತಿದ್ದ ಇಬ್ಬರ ದುರ್ಮರಣ!

ಚಿತ್ರದುರ್ಗ; ಚಿತ್ರದುರ್ಗ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಚಳ್ಳಕೆರೆ-ಹಿರಿಯೂರ ಮಾರ್ಗ ಮಧ್ಯದ ಆರ್.ಕೆ.ಪವರ್ ಜಿನ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ.. ಕುರಿ ವ್ಯಾಪಾರಕ್ಕೆ ಹೋಗುತ್ತಿದ್ದ ಶಿವಲಿಂಗ (65), ರಮೇಶ್ (55) ಎಂಬುವವರು ಸಾವನ್ನಪ್ಪಿದ್ದಾರೆ..

ಚಲಿಸುತ್ತಿದ್ದ ಲಾರಿ ಟ್ರಕ್ಕಿ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.. ಮೃತರಿಬ್ಬರೂ ಚಳ್ಳಕೆರೆ ತಾಲೂಕಿನ ಬೆಳಗೆರೆ ಗ್ರಾಮದವರಾಗಿದ್ದು, ಹಿರಿಯೂರಿಗೆ ಕುರಿ ವ್ಯಾಪಾರಕ್ಕೆ‌ ಹೊರಟಿದ್ದರು..

ಚಲಿಸುತ್ತಿದ್ದ ಲಾರಿಗೆ ಮಿನಿ ಟ್ರಕ್ ಡಿಕ್ಕಿ ಹೊಡೆದಿರೋ ಘಟನೆ ಚಳ್ಳಕೆರೆ-ಹಿರಿಯೂರ ಮಾರ್ಗ ಮಧ್ಯದ ಆರ್.ಕೆ.ಪವರ್ ಜಿನ್ ಬಳಿ ನಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಲಿಂಗ (65), ರಮೇಶ್ (55) ಮೃತ ದುರ್ದೈವಿಗಳು. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

Share Post