CrimeDistricts

ಚಂದ್ರಶೇಖರ್‌ ನಿಗೂಢ ಸಾವು ಪ್ರಕರಣ; ಗೌರಿಗದ್ದೆ ಆಶ್ರಮದಲ್ಲಿ ಮಾಹಿತಿ ಸಂಗ್ರಹ

ಚಿಕ್ಕಮಗಳೂರು; ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಪ್ರಕರಣದ ತನಿಖೆ ಚುರುಕುಗೊಂಡಿದೆ. ತನಿಖಾ ತಂಡ ಕೊಪ್ಪ ತಾಲ್ಲೂಕಿನ ಗೌರಿಗದ್ದೆಯ ವಿನಯ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದೆ. ನಿನ್ನೆ ಸಂಜೆ ಗೌರಿಗದ್ದೆಗೆ ಭೇಟಿ ನೀಡಿದ್ದ ತಂಡ ಆಶ್ರಮದಿಂದ ಒಂದಷ್ಟು ಮಾಹಿತಿಯನ್ನು ಕಲೆ ಹಾಕಿದೆ ಎಂದು ತಿಳಿದುಬಂದಿದೆ.

ಚನ್ನಗಿರಿ ಠಾಣೆ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಚಂದ್ರಶೇಖರ್ ಗೌರಿಗದ್ದೆ ಆಶ್ರಮಕ್ಕೆ ಎಷ್ಟು ಹೊತ್ತಿಗೆ ಬಂದರು, ಯಾವಾಗ ಹೋದರು ಎಂಬುದರ ಬಗ್ಗೆ ವಿವರ ಪಡೆದಿದ್ದಾರೆ. ಜೊತೆಗೆ ಆಶ್ರಮದಲ್ಲಿನ ಸಿ.ಸಿ. ಟಿವಿ ಫುಟೇಜ್‌ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ ಸಿಎಂ ಬೊಮ್ಮಾಯಿ ಹಾಗೂ ಹಲವು ಸಂಪುಟ ಸಚಿವರು ನವೆಂಬರ್‌ 9 ರಂದು ಹೊನ್ನಾಳಿಗೆ ಭೇಟಿ ನೀಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಹೊನ್ನಾಳಿಗೆ ಭೇಟಿ ನೀಡಿ ಶಾಸಕ ರೇಣುಕಾಚಾರ್ಯ ಅವರಿಗೆ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.

Share Post