Districts

ರಥೋತ್ಸವ ವೇಳೆ ಭಾರಿ ಅವಘಡ: ಪ್ರಾಣಾಪಾಯದಿಂದ ಪಾರು

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದಲ್ಲಿ ನಿನ್ನೆ ಶ್ರೀ ಜಡಿಶಂಕರಲಿಂಗ ದೇವರ ಜಾತ್ರೆ ವಿಜೃಂಭಣೆಯಿಂದ ನಡೆಯಿತ್ತು. ಈ ಹಿನ್ನೆಲೆಯಲ್ಲಿ ದೇವರ ರಥೋತ್ಸವ ಕೂಡ ಏರ್ಪಡಿಸಲಾಗಿತ್ತು. ತೇರು ಎಳೆಯುತ್ತಿದ್ದ ವೇಳೆ ಭಾರಿ ಅವಘಡ ಸಂಭವಿಸಿದೆ. ಏನಂದರೆ, ಸಾಮಾನ್ಯವಾಗಿ ಜಾತ್ರೆ, ಹಬ್ಬ- ಹರಿದಿನಗಳಲ್ಲಿ ಜನರು ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಅದೇ ರೀತಿ ಈ ದೊಡ್ಡ ಜಾತ್ರೆ ಆಗಿದ್ದರಿಂದ ರಥೋತ್ಸವ ಹೋಗುವ ಸಮಯದಲ್ಲಿ ಪಟಾಕಿ ಹೊಡೆದು ಜನರು ಸಂಭ್ರಮಿದ್ದರು. ಈ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ ತಗುಲಿದೆ. ಇದ್ದರಿಂದ ಗ್ರಾಮಸ್ಥರು ಭಯಭೀತರಾಗಿ ಬೆಂಕಿ ನಂದಿಸಿದರು. ಹೀಗಾಗಿ ಸ್ಥಳದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಹತ್ತಿದ್ದರಿಂದ ಅಪಶಕುನವಾಗಿದೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

Share Post