Districts

ಮನೆಯಂಗಳದಲ್ಲೇ ಯುವರತ್ನನ ಕಂಚಿನ ಪುತ್ಥಳಿ ಅನಾವರಣ

ಕೂಡ್ಲಿಗಿ: ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅಗಲಿ ಇಂದಿಗೆ ಒಂದೂವರೆ ತಿಂಗಳು ಕಳೆದಿದೆ. ಇನ್ನೂ ಅವರ ನೆನಪು ಮಾತ್ರ ಅಚ್ಚಳಿಯದೆ ಉಳಿದಿದೆ. ಈಗಾಗಲೇ ಪ್ರತಿದಿನ ಅವರ ನೆನಪಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಅಪ್ಪು ಅವರು ಇನ್ನೂ ಬದುಕಿ ಬಾಳಬೇಕಿದ್ದ ಇಹಲೋಕ ತ್ಯಜಿಸಿದ್ದಾರೆ. ಇದ್ದರಿಂದ ಅಭಿಮಾವಿಗಳಿಗೆ ಬೇಸರ ಉಂಟಾಗಿದೆ. ಮೊನ್ನೆ ತಾನೇ ನಡೆದ ಕೇಕ್‌ ಶೋ ನಲ್ಲಿ, ಚಾಕೋಲೇಟ್‌ ನಲ್ಲಿ ಅಪ್ಪು ಪುತ್ಥಳಿ ಮಾಡಲಾಗಿತ್ತು. ಅದನ್ನು ಕಂಡು ಅಭಿಮಾನಿಗಳು ಬೇಸರಗೊಂಡಿದ್ದರು. ಇದೀಗ ಮತ್ತೊಬ್ಬ ಅಭಿಮಾನಿಗಳು ತಮ್ಮ ಮನೆ ಅಂಗಳದಲ್ಲೇ ಅಪ್ಪು ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಿದ್ದಾರೆ. ಅಪ್ಪು ಅವರು ದೇವರ ಸ್ಥಾನ ಕೊಟ್ಟಿದ್ದು, ದಿನನಿತ್ಯ ಬೆಳಗ್ಗೆ ಮೊದಲು ಪುತ್ಥಳಿಗೆ ಪೂಜೆ ಮಾಡಲಾಗಿದೆ. ಇದನ್ನು ಕಂಡು ಪುನೀತ್‌ ಕುಮಾರ್‌ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಕೂಡ್ಲಿಗಿ ತಾಲೂಕಿನ ಸಿದ್ದಾಪುರ ವಡ್ಡರಹಟ್ಟಿಯಲ್ಲಿ ಆರ್‌.ಟಿ. ನಾಗರಾಜ ಮತ್ತು ಪತ್ನಿ ಮಲ್ಲಮ್ಮ ಅವರ ತಮ್ಮ ಮನೆಯ ಅಂಗಳದಲ್ಲೇ ಪುನೀತ್‌ ರಾಜ್‌ ಕುಮಾರ್‌ ಕಂಚಿನ ಪುತ್ಥಳಿ ಅನಾವರಣಗೊಳಿಸಿದ್ದಾರೆ. ಈ ದಂಪತಿಗೆ ಪುನೀತ್‌ ಅಂದರೆ ಇಷ್ಟ.ನಟನ ಮೇಲಿನ ಗೌರವ ಮತ್ತು ಅಭಿಮಾನದಿಂದ ಮನೆಯಂಗಳದಲ್ಲಿ ಪುನೀತ್‌ ಕಂಚಿನ ಪುತ್ಥಳಿಯನ್ನು ನಿರ್ಮಿಸಿದ್ದಾರೆ.

Share Post