CrimeDistrictsPolitics

ಕಾರಿನಲ್ಲಿ ಕುಳಿತು ಮತದಾರರಿಗೆ ಹಣ ಹಂಚಿಕೆ; ಸಿಕ್ಕಿಬಿದ್ದ ಶಾಸಕರ ಆಪ್ತ

ಮಂಗಳೂರು; ಬೆಳ್ತಂಗಡಿಯ ಶಾಸಕ ಹರೀಶ್‌ ಪೂಂಜಾ ಅವರ ಆಪ್ತರೊಬ್ಬರು ಮತದಾರರಿಗೆ ಹಣ ಹಂಚುತ್ತಾ ಸಿಕ್ಕಿಬಿದ್ದಿದ್ದಾರೆ. ಕಾರಿನಲ್ಲಿ ಕುಳಿತು ಹಣ ಹಂಚುತ್ತಿದ್ದಾಗ ಪೊಲೀಸರು ಅವರನ್ನು ರೆಡ್‌ ಹ್ಯಾಂಡಾಗಿ ಹಿಡಿದಿದ್ದಾರೆ. ಬೆಳ್ತಂಗಡಿಯ ಕೆಲ್ಲಗಾಟು ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

ಪಟ್ಟಣ ಪಂಚಾಯತಿ ಉಪಾಧ್ಯಕ್ಷ ಜಯಾನಂದಗೌಡ ಸಿಕ್ಕಿಬಿದ್ದವರು. ಅವರು ಮತಗಟ್ಟೆ ಬಳಿಯೇ ಕಾರಿನಲ್ಲಿ ಕುಳಿತು ಹಣ ಹಂಚುತ್ತಿದ್ದರು ಎಂದು ಹೇಳಲಾಗಿದೆ. ಕಾರಿನಲ್ಲೆಲ್ಲಾ ತಡಕಾಡಿದ ಪೊಲೀಸರಿಗೆ ನಗದು ಹಣ ಸಿಕ್ಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.

 

 

 

Share Post