CrimeNational

ಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; ಹತ್ತು ಮಂದಿಯ ಹತ್ಯೆ!

ಜಮ್ಮು-ಕಾಶ್ಮೀರ; ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, 10 ಮಂದಿಯನ್ನು ಹತ್ಯೆ ಮಾಡಿದ್ದಾರೆ.. ಘಟನೆಯಲ್ಲಿ 33 ಮಂದಿ ಯಾತ್ರಾರ್ಥಿಗಳು ಗಾಯಗೊಡಿದ್ದಾರೆ.. ಉಗ್ರರು ದಾಳಿ ಮಾಡಿದ್ದರಿಂದ ಬಸ್‌ ಚಾಲಕ ಯದ್ವಾತದ್ವಾ ಓಡಿಸಿದ್ದು, ಬಸ್‌ ಒಂದು ಗುಂಡಿಗೆ ಇಳಿದಿದೆ..

ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಬಳಿ ಈ ದಾಳಿ ನಡೆದಿದೆ.. ಶಿವ ಖೋರಿ ದೇವಸ್ಥಾನದಿಂದ ಕತ್ರಾ ಮಾರ್ಗವಾಗಿ 53 ಯಾತ್ರಾರ್ಥಿಗಳಿದ್ದ ಬಸ್‌ ಪ್ರಯಾಣ ಮಾಡುತ್ತಿತ್ತು.. ಈ ವೇಳೆ ಮರ್ಗಮಧ್ಯೆ ಉಗ್ರರು ದಾಳಿ ಮಾಡಿದ್ದಾರೆ.. ಇದ್ದಕ್ಕಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಬಸ್‌ ಚಾಲಕ ಗಾಬರಿಗೊಂಡಿದ್ದಾನೆ.. ಇದರಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕಮರಿಗೆ ನುಗ್ಗಿದೆ..

ನೆರೆಯ ರಜೌರಿ ಮತ್ತು ಪೂಂಚ್‌ಗೆ ಹೋಲಿಸಿದ್ರೆ ರಿಯಾಸಿ ಜಿಲ್ಲೆಯಲ್ಲಿ ಉಗ್ರರು ಹೆಚ್ಚಾಗಿಲ್ಲ.. ಆದ್ರೆ ಈ ಬಾರಿ ಈ ಜಿಲ್ಲೆಯಲ್ಲಿ ಹೆಚ್ಚಿನ ಉಗ್ರ ಚಟುವಟಿಕೆಗಳು ನಡೆಯುತ್ತಿವೆ.. ಇದು ಸೇನೆಗೆ ಹೊಸ ಸವಾಲಾಗಿದೆ..

 

Share Post