DistrictsPolitics

ಬಡವರ ಸಂಕಷ್ಟ ಅರಿಯಲು ಪಂಚರತ್ನ ಯಾತ್ರೆ; ಮಾಜಿ ಸಿಎಂ ಹೆಚ್ಡಿಕೆ

ಕೋಲಾರ; ನಾನು ಮತ ಕೇಳೋದಕ್ಕಾಗಿ ಪಂಚರತ್ನ ಯಾತ್ರೆ ಮಾಡುತ್ತಿಲ್ಲ. ಜನರ ಸಂಕಷ್ಟ ಏನೆಂಬುದನ್ನು ಅರಿಯಲು ಈ ಯಾತ್ರೆ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಪಂಚರತ್ನ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಿತ್ಯ 20 ಹಳ್ಳಿಗಳಲ್ಲಿ ಸಂಚಾರ ನಡೆಸಿ, ಹಳ್ಳಿಗಳಲ್ಲಿಯೇ ವಾಸ್ತವ್ಯ ಹೂಡೋದಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ನಮ್ಮ ಯಾತ್ರೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಕೆಲಸ ಇಲ್ಲದೆ ಯಾತ್ರೆ ಹೊರಟಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಅವರೇ ಈ ಪಕ್ಷ ಉಳಿಸಲು ಬಡವರಿದ್ದಾರೆ. ನೀವು ಏನೇ ಮಾತನಾಡಿದರೂ ಜೆಡಿಎಸ್‌ ಪಕ್ಷ ಉಳಿಯುತ್ತದೆ. ಜನ ಉಳಿಸುತ್ತಾರೆ ಎಂದು ಹೆಚ್ಡಿಕೆ ಹೇಳಿದರು.

Share Post