BengaluruPolitics

ಮತದಾರರ ಮಾಹಿತಿಗೆ ಕನ್ನ‌ ಪ್ರಕರಣ; ಡಿಕೆಶಿ ಮತ್ತೊಂದು ಬಾಂಬ್

ಬೆಂಗಳೂರು; ಮತದಾರರ ಮಾಹಿತಿಗೆ ಕನ್ನ ಹಾಕಿದ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. ಚಿಲುಮೆ ಸಂಸ್ಥೆ ಮೂಲಕ ಬ್ಲ್ಯಾಕ್‌ ಮನಿಯನ್ನು ವೈಟ್‌ ಮಾಡಲಾಗಿದೆ ಎಂದು ಡಿಕೆಶಿ ಗಂಭೀರ ಆರೋಪ ಮಾಡಿದ್ದಾರೆ.

ನೋಟ್‌ ಕೌಂಟಿಂಗ್‌ ಮಷಿನ್‌ ಸಿಕ್ಕಿದೆ, ಜೊತೆಗೆ ವೋಟರ್‌ ಲಿಸ್ಟ್‌ ಅಕ್ರಮ ಬಯಲಾಗಿದೆ. ಆದರೂ ಸರ್ಕಾರ ಇದುವರೆಗೂ ಯಾರನ್ನೂ ಬಂಧಿಸಿಲ್ಲ.  2000 ರೂಪಾಯಿ ಮೇಲೆ ಹಣ ಪಡೆದುಕೊಳ್ಳುವಂತಿಲ್ಲ. ಆದ್ರೆ ಚಿಲುಮೆ ಕಚೇರಿಯಲ್ಲಿ ನಗದು ವಹಿವಾಟು ಜಾಸ್ತಿ ಆಗಿದೆ. ಬ್ಲಾಕ್ ಮನಿ ವೈಟ್ ಮಾಡುವ ಕೆಲಸ ಅಲ್ಲಿ ನಡೆದಿದೆ ಎಂದು ಡಿ.ಕೆ.ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ.

 

Share Post