CrimeDistrictsPolitics

ಯುವ ಬ್ರಿಗೇಡ್‌ ಕಾರ್ಯಕರ್ತನ ಹತ್ಯೆ; ಸತ್ಯ ಶೋಧಕ್ಕೆ ಹೋಗಿದ್ದ ಬಿಜೆಪಿ ನಾಯಕರಿಗೆ ಶಾಕ್‌..!

ಮೈಸೂರು; ಟಿ ನರಸೀಪುರದಲ್ಲಿ ಮೊನ್ನೆಯ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ್‌ ಹತ್ಯೆ ನಡೆದಿತ್ತು.. ಹನುಮ ಜಯಂತಿ ಸಮಯದಲ್ಲಿ ದೇವರ ಬಳಿ ಪುನೀತ್‌ ರಾಜ್‌ಕುಮಾರ್‌ ಫೋಟೋ ಇಟ್ಟಿದ್ದಕ್ಕೆ ವೇಣುಗೋಪಾಲ್‌ ಆಕ್ಷೇಪ ವ್ಯಕ್ತಪಡಿಸಿ, ಫೋಟೋ ತೆಗೆಸಿದ್ದರು. ಈ ಕಾರಣಕ್ಕೆ ಕೆಲವು ಸ್ನೇಹಿತರೇ ವೇಣುಗೋಪಾಲ್‌ನನ್ನು ಸಂಧಾನಕ್ಕೆಂದು ಕರೆಸಿಕೊಂಡು ಹತ್ಯೆ ನಡೆಸಿದ್ದರು. ಈ ವಿಚಾರವಾಗಿ ಬಿಜೆಪಿ ನಾಯಕರು ಸತ್ಯಶೋಧನೆಗೆ ಮುಂದಾಗಿದ್ದಾರೆ. ಅದ್ರೆ ಅವರಿಗೆ ಶುರುವಿನಲ್ಲೇ ಶಾಕ್‌ ಆಗಿದೆ. ಕಾರಣ, ಹತ್ಯೆ ಆರೋಪಿಗಳಲ್ಲಿ ಒಬ್ಬ ಬಿಜೆಪಿ ಕಾರ್ಪೊರೇಟರ್‌ ಒನ್ನ ಸಹೋದರನಾಗಿರೋದು.

ಹೌದು, ಪ್ರಕರಣದ ನಾಲ್ಕನೇ ಆರೋಪಿ ಶಂಕರ್‌ ಅಲಿಯಾಸ್‌ ತುಪ್ಪಾ ಅವರು ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯೊಬ್ಬ ಸಹೋದರ ಎಂದು ತಿಳಿದುಬಂದಿದೆ. ವೇಣುಗೋಪಾಲ್ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್‌ಸಿಂಹ, ಶಾಸಕ ಶ್ರೀವತ್ಸ, ಮಾಜಿ ಸಚಿವ ಸಿ.ಎನ್. ಅಶ್ವಥ್ ನಾರಾಯಣ್, ಮಾಜಿ ಶಾಸಕರಾದ ಎನ್. ಮಹೇಶ್, ಪ್ರೀತಮ್ ಗೌಡ ಮುಂತಾದವರು ಭೇಟಿ ಕೊಟ್ಟಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

Share Post