BengaluruPolitics

ವರ್ಗಾವಣೆ ವಿಚಾರವಾಗಿ ವಾಗ್ಯುದ್ಧ; ಯತ್ನಾಳ್‌ಗೆ ಡಿಕೆಶಿ ತೀವ್ರ ತರಾಟೆ

ಬೆಂಗಳೂರು; ವಿಧಾಸಭೆ ಕಲಾಪದಲ್ಲಿ ಇಂದು ವರ್ಗಾವಣೆ ವಿಚಾರ ಮತ್ತೆ ಸದ್ದು ಮಾಡಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ರಾಜ್ಯ ಸರ್ಕಾರ ವರ್ಗಾವಣೆ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿದ್ದು, ಕಾಂಗ್ರೆಸ್‌ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಯತ್ನಾಳ್‌ ಹೇಳಿಕೆಯಿಂದ ಕೆರಳಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಆಕ್ರೋಶ ಹೊರಹಾಕಿದರು.

ಯತ್ನಾಳ್‌ ಅವರಿಗೆ ಸಾಕು ಕೂತ್ಕೊಳಯ್ಯ ಎಂದು ಏಕವಚನದಲ್ಲೇ ಮಾತನಾಡಿದರು. ಇದರ ವಿರುದ್ಧ ಯತ್ನಾಳ್‌ ಕೂಡಾ ಕೆರಳಿದರು. ಸದನದ ಬಾವಿಗಿಳಿದು ಯತ್ನಾಳ್‌ ಪ್ರತಿಭಟನೆ ನಡೆಸಿದರು. ಅನಂತರ ಸ್ಪೀಕರ್‌ ಕಲಾಪವನ್ನು ಕೆಲಕಾಲ ಮುಂದೂಡಿ ಸಂಧಾನ ಸಭೆ ನಡೆಸಿದರು. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಕೂಡಾ ಯತ್ನಾಳ್‌ ವಿರುದ್ಧ ಆಕ್ರೋಶ ಹೊರಹಾಕಿದರು. ನೀವು ವ್ಯಾಪಾರ ಮಾಡಿದ್ದು, ನಾವಲ್ಲ ಎಂದು ಯತ್ನಾಳ್‌ಗೆ ಸಿಎಂ ಸಿದ್ದರಾಮಯ್ಯ ಟಾಂಗ್‌ ಕೊಟ್ಟರು. ಸುಮ್ಮನೆ ಏನೇನೋ ಮಾತಾಡಬೇಡಿ, ಹಿರಿಯರಾಗಿ ನಿಯಮಾವಳಿಯಂತೆ ನಡೆದುಕೊಳ್ಳಿ ಎಂದು ಯತ್ನಾಳ್‌ಗೆ ಸಲಹೆ ಕೊಟ್ಟರು.

Share Post