Districts

ಸಂಸದ ಡಿ.ಕೆ.ಸುರೇಶ್‌ – ಸಚಿವ ಅಶ್ವತ್ಥನಾರಾಯಣ್‌ ಜಟಾಪಟಿ

ರಾಮನಗರ:  ರಾಮನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಹಾಹೂ ಸಚಿವ ಅಶ್ವತ್ಥ ನಾರಾಯಣ ವಾಗ್ಯುದ್ಧ ನಡೆಸಿರುವ ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರಿಗೆ ಸೂಕ್ತ ಗೌರವ ನೀಡಲಿಲ್ಲ ಎಂಬ ಕಾರಣಕ್ಕೆ ಸಿಎಂ ಬೊಮ್ಮಾಯಿ ಸಮ್ಮಖದಲ್ಲೇ ಸಂಸದ ಡಿ.ಕೆ.ಸುರೇಶ್‌ ಹಾಗೂ ಸಚಿವ ಅಶ್ವತ್ಥನಾರಾಯಣ ಬೈದಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಕೈ ತೋರಿಸಿಕೊಂಡು ಬೈದಾಡಿಕೊಂಡರು. ಏರುಧ್ವನಿಯಲ್ಲಿ ಮಾತನಾಡಿದರು. ಈ ವೇಳೆ ಡಿ.ಕೆ.ಸುರೇಶ್‌ ಬೆಂಬಲಿಗರು ಕೂಡಾ ವೇದಿಕೆ ಏರಿ, ಸಚಿವ ಅಶ್ವತ್ಥನಾರಾಯಣ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಶ್ವತ್ಥನಾರಾಯಣ್‌ ಅವರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ವೇಳೆ, ಅವರ ಮಾತಿಗೆ ಸಂಸದ ಡಿ.ಕೆ.ಸುರೇಶ್‌ ಆಕ್ಷೇಪ ವ್ಯಕ್ತಪಡಿಸಿದರು. ಅಶ್ವತ್ಥನಾರಾಯಣ್‌ ಮಾತನಾಡುತ್ತಿದ್ದ ಸ್ಥಳಕ್ಕೇ ಬಂದು ವಾಗ್ಯುದ್ಧ ನಡೆಸಿದರು. ಈ ವೇಳೆ ಇಬ್ಬರ ನಡುವೆಯೂ ವಾಗ್ವಾದ ನಡೆಯಿತು. ಕಡೆಗೆ ಪೊಲೀಸರು ಬಂದು, ಇಬ್ಬರನ್ನೂ ಸಮಾಧಾನಪಡಿಸಬೇಕಾಯಿತು.

ಇದೇ ವೇಳೆ ಸಂಸದ ಡಿ.ಕೆ.ಸುರೇಶ್‌ ವೇದಿಕೆ ಮೇಲೆಯೇ ಧರಣಿ ನಡೆಸಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾಧಾನ ಮಾಡಿದರು. ಇದೇ ವೇಳೆ ಡಿ.ಕೆ.ಸುರೇಶ್‌ ಬೆಂಬಲಿಗರು ದೊಡ್ಡ ಗದ್ದಲ ಶುರು ಮಾಡಿದರು. ವೇದಿಕೆ ಮೇಲೆ ಏರಿ ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬೊಮ್ಮಾಯಿಯವರೇ ಎದ್ದು ಮಾತನಾಡಿ, ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ, ಅದಕ್ಕೆ ಡಿ.ಕೆ.ಶಿವಕುಮಾರ್‌ ಬೆಂಬಲಿಗರು ಸಮಧಾನಗೊಳ್ಳಲಿಲ್ಲ. ಇನ್ನಷ್ಟು ಘೋಷಣೆಗಳನ್ನು ಕೂಗಿದರು.

 

Share Post