CrimeDistricts

ಗುಂಪು ಘರ್ಷಣೆ ಹಿನ್ನೆಲೆ; ಗ್ರಾಮ ತೊರೆದಿದ್ದ ಯುವಕ ಶವವಾಗಿ ಪತ್ತೆ..!

ಕೊಪ್ಪಳ; ಎರಡು ತಿಂಗಳ ಹಿಂದೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಅಂದಿನಿಂದ ಗ್ರಾಮ ತೊರೆದಿದ್ದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ನಾಗರಾಜ ಎಂಬ ಯುವಕನೇ ಸಾವನ್ನಪ್ಪಿರುವವರು.
ಗ್ರಾಮದಲ್ಲಿ ನಡೆದ ಘರ್ಷಣೆ ಬಳಿ ನಾಗರಾಜ ಅವರು ಗಂಗಾವತಿಯ ಬಸವಣ್ಣ ವೃತ್ತದ ಬಳಿ ಇರುವ ಸಂಬಂಧಿಕರ ಮನೆಯಲ್ಲಿ ಬಾಡಿಗೆಗಿದ್ದ. ಆದ್ರೆ ಇದೀಗ ಆತ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಎರಡು ತಿಂಗಳ ಹಿಂದೆ ಹುಲಿಹೈದರ ಗ್ರಾಮದಲ್ಲಿ ವಾಲ್ಮೀಕಿ ವೃತ್ತದ ವಿಚಾರವಾಗಿ ಜಗಳ ನಡೆದಿತ್ತು. ಇದಾದ ಮೇಲೆ 80 ಜನರ ವಿರುದ್ಧ ಪ್ರಕರಣ ದಾಖಲಾಗಿ, ಬಹುತೇಕರನ್ನು ಬಂಧಿಸಲಾಗಿದೆ.

ಹೀಗಿರುವಾಗಲೇ ಕೆಲವರು ಗ್ರಾಮ ತೊರೆದಿದ್ದರು. ನಾಗರಾಜ ಕೂಡಾ ಗ್ರಾಮ ತೊರೆದಿದ್ದು, ಇದೀಗ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗಂಗಾವತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share Post