DistrictsPolitics

ಮೋದಿ ವಿಷ ಸರ್ಪ ಹೇಳಿಕೆ; ಬಿಜೆಪಿಗೆ 2-3 ಪರ್ಸೆಂಟ್‌ ಮತ ಹೆಚ್ಚಾಯ್ತು ಎಂದ ಸುಧಾಕರ್‌

ಚಿಕ್ಕಬಳ್ಳಾಪುರ; ಪ್ರಧಾನಿ ನರೇಂದ್ರ ಮೋದಿಯವರು ವಿಷ ಸರ್ಪ ಇದ್ದಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಇದರಿಂದ ಬಿಜೆಪಿಗೆ ಲಾಭವಾಗಿದೆ ಎಂದು ಹೇಳಿದ್ದಾರೆ. ಖರ್ಗೆಯವರ ಈ ಹೇಳಿಕೆಯಿಂದ ಬಿಜೆಪಿಗೆ ೨-೩ ಪರ್ಸೆಂಟ್‌ ಮತಗಳು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು, ಖರ್ಗೆಯವರು ಆ ರೀತಿ ಮಾತನಾಡಿ, ಭಾರತದ 130 ಕೋಟಿ ಜನರಿಗೆ ಅವಮಾನ ಮಾಡಿದ್ದಾರೆ. ಮೋದಿಯವರು ಇಡೀ ವಿಶ್ವಕ್ಕೇ ನಾಯಕರು. ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಖರ್ಗೆಯವರ ರಾಜಕೀಯದ ಮಾತುಗಳು ಕಾಂಗ್ರೆಸ್‌ನ ದಿವಾಳಿತನವನ್ನು ತೋರಿಸುತ್ತವೆ ಎಂದು ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

Share Post