DistrictsPolitics

ವಿಭಿನ್ನವಾಗಿ ಗುರುತಿಸಿಕೊಳ್ತಿರುವ ಶಾಸಕ ಪ್ರದೀಪ್‌ ಈಶ್ವರ್‌; ಶಾಸಕರಿಂದ ಪೌರಕಾರ್ಮಿಕರ ಪಾದ ಪೂಜೆ

ಚಿಕ್ಕಬಳ್ಳಾಪುರ; ಅಚಾಕನ್ನಾಗಿ ಬಂದು ಶಾಸಕನಾಗಿ ಆಯ್ಕೆಯಾಗಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಜನ ಸಾಮಾನ್ಯ ನಡುವೆಯೇ ಕಾಣಿಸಿಕೊಳ್ಳುವ ಅವರು, ಜನರ ಬಳಿಗೇ ಹೋಗಿ ಕಷ್ಟ ಸುಖ ಕೇಳುತ್ತಾರೆ. ಹೀಗಾಗಿ ಪ್ರದೀಪ್‌ ಈಶ್ವರ್‌ ಜನಸಾಮಾನ್ಯರ ಶಾಸಕ ಎಂದೇ ಫೇಮಸ್‌ ಆಗುತ್ತಿದ್ದಾರೆ.

ಪ್ರತಿ ದಿನ ಜನರ ಮನೆಮನೆಗೂ ತೆರಳಿ ಅವರ ಸಮಸ್ಯೆ ಕೇಳುವ, ಸಾಧ್ಯವಾದರೆ ಸ್ಥಳದಲ್ಲೇ ಸಮಸ್ಯೆ ಪರಿಹರಿಸುವ ಶಾಸಕ ಪ್ರದೀಪ್‌ ಈಶ್ವರ್‌, ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಗಮನ ಸೆಳೆದಿದ್ದಾರೆ. ಚಿಕ್ಕಬಳ್ಳಾಪುರ ನಗರಸಭೆ ಆವರಣದಲ್ಲಿ ನಿರ್ಮಾಣವಾಗಿರುವ ವಿಶ್ರಾಂತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಶಾಸಕರು ಪಾಲ್ಗೊಂಡಿದ್ದರಯ.

ಈ ಕಾರ್ಯಕ್ರಮಕ್ಕೂ ಮುನ್ನ ಶಾಸಕ ಪ್ರದೀಪ್‌ ಈಶ್ವರ್‌ ಅವರು ಪೌರ ಕಾರ್ಮಿಕರಿಗೆ ಪಾದ ಪೂಜೆ ಮಾಡಿ ನಮಸ್ಕಾರ ಮಾಡಿದ್ದಾರೆ.

 

Share Post