Districts

ಹಾಸನದಲ್ಲಿ ಕಂಪಿಸಿದ ಭೂಮಿ; ಗಾಬರಿಯಿಂದ ಹೊರಗೇ ಇರುವ ಜನ!

ಹಾಸನ; ಹಾಸನ ಜಿಲ್ಲೆಯ ಹಲವು ಕಡೆ ಇಂದು ಬೆಳಗ್ಗೆ ಭೂಮಿ ಕಂಪಿಸಿದೆ. ಅರಕಲಗೂಡು ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 10.25ಕ್ಕೆ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದರೆ, ಇನ್ನು ಕೆಲವು ಪ್ರದೇಶಗಳಲ್ಲಿ 10.34ಕ್ಕೆ ಭೂಮಿ ನಡುಗಿದೆ. ಇದರಿಂದ ಭಯಭೀತರಾದ ಜನ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮತ್ತೆ ಮನೆಯೊಳಗೆ ಹೋಗಲು ಭಯ ಬೀಳುತ್ತಿದ್ದಾರೆ.

ಹಾಸನದ ಇನ್ನೂ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಕೆಲವು ಸೆಕೆಂಡ್‌ಗಳ ಕಾಲ ಭೂಮಿ ನಡುಗಿದೆ. ಜನರೆಲ್ಲಾ ಇನ್ನೂ ಮನೆಗಳೊಳಗೆ ಹೋಗದೇ ಹೊರಗೇ ನಿಂತಿದ್ದಾರೆ.

Share Post