Districts

ಎಂ.ಬಿ.ಪಾಟೀಲ್‌ ನನ್ನ ಸ್ನೇಹಿತರು, ಬೇಕೆನಿಸಿದರೆ ಭೇಟಿ ಮಾಡುತ್ತೇನೆ; ಅಶ್ವತ್ಥನಾರಾಯಣ

ರಾಮನಗರ; ಕಾಂಗ್ರೆಸ್‌ ನಾಯಕ ಎಂ.ಬಿ.ಪಾಟೀಲ್‌ ನನ್ನ ಸ್ನೇಹಿತರು. ಅವರನ್ನು ಭೇಟಿ ಮಾಡಬೇಕು ಎನಿಸಿದಾಗ ಖಂಡಿತವಾಗಿಯೂ ಭೇಟಿ ಮಾಡುರ್ರೇನೆ. ಅದಕ್ಕೆ ಡಿ.ಕೆ.ಶಿವಕುಮಾರ್‌ ಅನುಮತಿ ಪಡೆಯಬೇಕಾ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಪ್ರಶ್ನೆ ಮಾಡಿದ್ದಾರೆ.

 

ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರು ಧ್ವನಿ ಎತ್ತರಬಾರದೆಂದು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದರು. ಶಿವಕುಮಾರ್‌ ಅವರು ಹೇಳಿದಂತೆ ನಾನು ಶಾಸಕ ಎಂ.ಬಿ.ಪಾಟೀಲ್ ಅವರನ್ನು ಭೇಟಿ ಮಾಡಿಲ್ಲ. ಬೇಕು ಎನಿಸಿದರೆ ಅವರನ್ನು ಭೇಟಿ ಮಾಡುತ್ತೇನೆ ಎಂದರು.

 

Share Post