CrimeDistricts

ಅನಿರೀಕ್ಷಿತ ಸ್ಫೋಟವಲ್ಲ, ಇದರ ಹಿಂದೆ ಉಗ್ರರಿದ್ದಾರೆ; ಪ್ರವೀಣ್‌ ಸೂದ್‌

ಮಂಗಳೂರು; ನಿನ್ನೆ ಮಂಗಳೂರಿನ ಅಟೋವೊಂದರಲ್ಲಿ ನಡೆದ ಕುಕ್ಕರ್‌ ಸ್ಫೋಟ ಅನಿರೀಕ್ಷಿತವಲ್ಲ ಅನ್ನೋದು ಖಾತ್ರಿಯಾಗಿದೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್ ಸೂದ್  ಹೇಳಿದ್ದಾರೆ. ಈ ಬಗ್ಗೆ ಅವರು ಟ್ವೀಟ್‌ ಮಾಡಿ ಮಾಹಿತಿ ನೀಡಿದ್ದಾರೆ.

ಇದು ಅನಿರೀಕ್ಷತವಾಗಿ ನಡೆದದ್ದಲ್ಲ. ಹಾನಿಯುಂಟು ಮಾಡಲೆಂದೇ ಪ್ಲ್ಯಾನ್‌ ಮಾಡಿ ಸ್ಫೋಟಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳ ಜೊತೆ ಚರ್ಚೆ ನಡೆಸಿ ಈ ಪ್ರಕರಣವನ್ನು ಆಳವಾಘಿ ತನಿಖೆ ನಡೆಸುತ್ತಿದ್ದೇವೆ ಎಂದು ಪ್ರವೀಣ್‌ ಸೂದ್‌ ಬರೆದುಕೊಂಡಿದ್ದಾರೆ.

Share Post