Districts

ಆಲೆಮನೆಯಲ್ಲಿ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ತಲೆ ಕಟ್‌

ಹೊಸಪೇಟೆ (ವಿಜಯನಗರ): ಆಲೆ ಮನೆಯಲ್ಲಿ ಕಬ್ಬು ನುರಿಯುವ ಯಂತ್ರಕ್ಕೆ ಸಿಲುಕಿ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬನ ರುಂಡ ಬೇರ್ಪಟ್ಟಿರುವ ಘಟನೆ ನಡೆದಿದೆ. ಈ ಘಟನೆ ನಡೆದಿರೋದು ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ.

ಉತ್ತರ ಪ್ರದೇಶದ ಸುಶೀಲ್‌ (40) ಎಂಬಾತನೇ ಮೃತ ವ್ಯಕ್ತಿ. ನಾಗೇನಹಳ್ಳಿ ಸಮೀಪದ ಕಬ್ಬಿನ ಆಲೆಮನೆಯಲ್ಲಿ ಈ ದುರ್ಘಟನೆ ನಡೆದಿದೆ. ಸುಶೀಲ್‌ ಅವರು ಕಬ್ಬು ನುರಿಯುವ ಯಂತ್ರಕ್ಕೆ ಗ್ರೀಸ್‌ ಹಚ್ಚುತ್ತಿದ್ದ ವೇಳೆ ಅದರೊಳಗೆ ಅವರ ತಲೆ ಸಿಲುಕಿಕೊಂಡಿದೆ. ಯಂತ್ರ ವೇಗವಾಗಿ ತಿರುಗುತ್ತಿದ್ದರಿಂದ ರುಂಡ ಬೇರ್ಪಟ್ಟಿದೆ. ರುಂಡ ಒಂದು ಕಡೆ, ದೇಹ ಒಂದು ಕಡೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಸ್ಥಳದಲ್ಲಿ ಸೇರಿದ್ದರು. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Share Post