DistrictsPolitics

ಕಾಂಗ್ರೆಸ್‌ ಮುಟ್ಟಿದವರೆಲ್ಲಾ ಸರ್ವನಾಶ ಆಗುತ್ತಿದ್ದಾರೆ; ಕೆ.ಎಸ್‌.ಈಶ್ವರಪ್ಪ

ಶಿವಮೊಗ್ಗ; ಸರ್ಕಾರಗಳ ರಚನೆಯಲ್ಲಿ ಕಾಂಗ್ರೆಸ್‌ ಪಕ್ಷ ಯಾರ್ಯಾರಿಗೆ ಬೆಂಬಲ ಕೊಟ್ಟಿದೆಯೋ, ಆ ಪಕ್ಷಗಳು ಸರ್ವನಾಶವಾಗುತ್ತಿವೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ಶಿವಸೇನೆ ಸರ್ಕಾರ ರಚಿಸಿತ್ತು. ಈ ಸರ್ಕಾರ ಕೂಡಾ ಶೀಘ್ರದಲ್ಲೇ ಪತನವಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷ ಯಾವುದೇ ಪಕ್ಷಕ್ಕೆ ಬೆಂಬಲ ಕೊಡಲಿ ಆ ಪಕ್ಷದ ಕಥೆ ಮುಗೀತು ಅಂತಾನೆ ಲೆಕ್ಕ. ಕಾಂಗ್ರೆಸ್‌ ಪಕ್ಷ ಯಾರನ್ನು ಮುಟ್ಟುತ್ತದೆಯೋ ಅವೆಲ್ಲಾ ಸರ್ವನಾಶವಾಗುತ್ತಿದ್ದಾರೆ ಎಂದ ಈಶ್ವರಪ್ಪ  ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತಾ ಹುಡುಕುವಂತಹ ಸ್ಥಿತಿ ಇದೆ. ಅಲ್ಲಿ 3-4 ಸ್ಥಾನ ಉಳಿಸಿಕೊಂಡು ಸರ್ವನಾಶ ಆಗಿದ್ದಾರೆ. ಅದೇ ರೀತಿ ಮಹಾರಾಷ್ಟ್ರದಲ್ಲೂ ಈ ಸರ್ಕಾರ ಬಿದ್ದು ಹೋಗುತ್ತಿದೆ ಎಂದರು.

ಮಹಾರಾಷ್ಟ್ರದಲ್ಲಿ ಈ ಹಿಂದೆ ಹಿಂದುತ್ವದ ಪರಿಸ್ಥಿತಿ ಇತ್ತು. ಬಾಳ್ ಠಾಕ್ರೆ ಅಂದರೆ ಹಿಂದುತ್ವದ ಬಗ್ಗೆ ಸಿಂಹ ಘರ್ಜನೆ ಎನ್ನಲಾಗುತ್ತಿತ್ತು.  ಆದರೆ ಅವರ ಪುತ್ರ ಉದ್ಧವ್ ಠಾಕ್ರೆ ಅವರದ್ದು ಹಿಂದುತ್ವದ ಬಗ್ಗೆ ಇಲಿ ಧೋರಣೆ ಆಗಿದೆ. ಹೀಗಾಗಿಯೇ ಮಹಾರಾಷ್ಟ್ರ ಸರ್ಕಾರ ಉಳಿಯುವುದಿಲ್ಲ ಎಂದರು.

Share Post