DistrictsPolitics

ಲೋಕಸಭೆಗೆ ನುಗ್ಗಿದ ಘಟನೆಯನ್ನು ಎಲ್ಲರೂ ಖಂಡಿಸಬೇಕು; ಸಿದ್ದರಾಮಯ್ಯ

ಬೆಳಗಾವಿ; ಇಬ್ಬರು ಯುವಕರು ಲೋಕಸಭೆಗೆ ನುಗ್ಗಿದ ಪ್ರಕರಣವನ್ನು ಎಲ್ಲರೂ ಖಂಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಪಾಸ್‌ಗಳನ್ನು ಕೊಡುವಾಗ ಪರಿಚಯ ಇರುವವರಿಗೆ ಕೊಡಬೇಕು. ಯಾರೋ ಗೊತ್ತಿಲ್ಲದವರಿಗೆಲ್ಲಾ ಪಾಸ್‌ಗಳನ್ನು ವಿತರಣೆ ಮಾಡಬಾರದು ಎಂದು ಹೇಳಿದ್ದಾರೆ.

ಮೇಲ್ನೋಟಕ್ಕೆ ಇದು ಭದ್ರತಾ ಲೋಪ ಎಂದು ಗೊತ್ತಾಗುತ್ತಿದೆ. ಸಂಸದರಿಂದ ಪಾಸ್‌ ಪಡೆದು ಒಳಗೆ ಹೋಗಿದ್ದಾರೆ. ಭದ್ರತಾ ಸಿಬ್ಬಂದಿ ಸರಿಯಾಗಿ ತಪಾಸಣೆ ಮಾಡಿಲ್ಲ. ಸಚಿವರಿಗೂ ಸೇರಿ ಎಲ್ಲರಿಗೂ ತಪಾಸಣೆ ಮಾಡುತ್ತಾರೆ. ಆದ್ರೆ ಯಾಕೆ ಹುಡುಗರ ತಪಾಸಣೆ ಮಾಡಿಲ್ಲವೋ ಗೊತ್ತಾಗುತ್ತಿಲ್ಲ. ಭದ್ರತಾಲೋಪ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 

Share Post