BengaluruCrimePolitics

ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣ; ಪ್ರದೀಪ್‌ ನಿವಾಸಕ್ಕೆ ಸಿದ್ದರಾಮಯ್ಯ, ಸುರ್ಜೇವಾಲಾ ಭೇಟಿ

ಬೆಂಗಳೂರು; ಹಣಕಾಸಿನ ವಿಚಾರಕ್ಕೆ ಮನನೊಂದು ಕಾರಿನಲ್ಲೇ ತಲೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರದೀಪ್‌ ನಿವಾಸಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಮಲಿಂಗಾರೆಡ್ಡಿ ಸೇರಿ ಹಲವು ನಾಯಕರು ಭೇಟಿ ನೀಡಿದ್ದರು. ಉದ್ಯಮಿ ಪ್ರದೀಪ್‌ ಅವರು ಜನವರಿ 1 ರಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿ ಆರು ಮಂದಿಯ ಹೆಸರುಗಳನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಗ್ಗಲೀಪುರದ ಪ್ರದೀಪ್‌ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್‌ ನಾಯಕರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಪ್ರದೀಪ್‌ ಅವರು ಅರವಿಂದ ಲಿಂಬಾವಳಿ ಅವರ ಬೆಂಬಲಿಗರಿಬ್ಬರ ಜೊತೆ ಹಣಕಾಸಿನ ವಿಚಾರಕ್ಕೆ ಮನಸ್ತಾಪ ಹೊಂದಿದ್ದರು ಎನ್ನಲಾಗಿದೆ. ಇದೇ ವಿಚಾರ ಸಂಬಂಧ ಲಿಂಬಾವಳಿ ಅವರ ಜೊತೆ ಮಾತನಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲವಂತೆ. ಹೀಗಾಗಿ ಲಿಂಬಾವಳಿ ಸೇರಿ ಆರು ಮಂದಿಯ ಹೆಸರುಗಳನ್ನು ಬರೆದಿಟ್ಟು ಪ್ರದೀಪ್‌ ಆತ್ಮಹತ್ಯೆ ಮಾಡಿಕೊಂಡಿದ್ದರು.

Share Post