Districts

ಕ್ಷೀರ ಅಭಿವೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಸಿದ್ಧತೆ: ಲೋಗೋ ಲಾಂಚ್‌ ಮಾಡಲಿರುವ ಅಮಿತ್‌ ಶಾ

ಹಾವೇರಿ: ಸಿಎಂ ಬೊಮ್ಮಾಯಿ ಹಾವೇರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಜೆಟ್‌ ನಲ್ಲಿ ಘೋಷಿಸಿರುವ ಪ್ರಮುಖ ವಿಚಾರಗಳನ್ನು ತೀವ್ರ ಗತಿಯಲ್ಲಿ ಅನುಷ್ಠಾನಗೊಳಿಸಲು ಅದನ್ನು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮಾಡಲು ತೀರ್ಮಾನ ಮಾಡಲಾಗಿದೆ. ಹಣಕಾಸು ಇಲಾಖೆ ಅನುಮತಿ ಮೇರೆಗೆ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತದೆ. ನಮ್ಮ ಸರ್ಕಾರ ಬಂದಮೇಲೆ ಕೈಗಾರಿಕೋದ್ಯಮಕ್ಕೆ ಬಹಳಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಬಹಳ ದೊಡ್ಡ ಪ್ರಮಾಣದ ಬಂಡವಾಳದ ಆಕರ್ಷಣೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಒಂದನೇ ತಾರೀಖು ರಾಜ್ಯಕ್ಕೆ ಅಮಿತ್‌ ಶಾ ಬರಲಿದ್ದಾರೆ. ಸಹಕಾರಿ ರಂಗದಲ್ಲಿ ಹಲವಾರು ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಕ್ಷೀರ ಅಭಿವೃದ್ಧಿ ಬ್ಯಾಂಕ್‌ ಪ್ರಾರಂಭ ಮಾಡಲಿದ್ದೇವೆ. ಅದರ ಲೋಗೋ ಉದ್ಘಾಟನೆ ಮಾಡಲು ಬೃಹತ್‌ ಸಭೆ ಮಾಡ್ತೇವೆ. ಇದು ಕ್ಚೀರ ಕ್ಷೇತ್ರದಲ್ಲಿ ಆರ್ಥಿಕ ಕ್ರಾಂತಿ ಉಂಟು ಮಾಡುತ್ತದೆ. ಇದರಿಂದ ರೈತರ ಅಭಿವೃದ್ಧಿ ಜೊತೆಗೆ ಅವರ ಆದಾಯವೂ ಹೆಚ್ಚಾಗಲಿದೆ. ಐದನೇ ತಾರೀಖು ಪ್ರಧಾನಿ ಮೋದಿ ಬರುವ ಸಾಧ್ಯತೆಗಳಿವೆ ಎಂದಿದ್ದಾರೆ. ಮೋದಿ ಬರುತ್ತಿರುವುದು ಅಭಿವೃದ್ದಿ ಕಾರ್ಯಕ್ರಮಗಳ ನಿಮಿತ್ತ. ಅವರ ಭೇಟಿ ಯಾವುದೇ ಸಚಿವ ಸಂಪುಟ ವಿಸ್ತರಣೆ ಮಾಡುವ ವಿಚಾರ ಹೊಂದಿಲ್ಲ ಇದು ದೆಹಲಿಗೆ ಹೋಗಿ ಚರ್ಚೆ ಮಾಡುವಂತಹ ವಿಚಾರವಾಗಿದೆ ಎಂದು ಬೊಮ್ಮಾಯಿ ಹೇಳಿದ್ರು.

Share Post