CrimeDistricts

ಲಾರಿ-ಸರ್ಕಾರಿ ಬಸ್‌ ನಡುವೆ ಭೀಕರ ಅಪಘಾತ; 65 ಪ್ರಯಾಣಿಕರ ಪ್ರಾಣ ಉಳಿದಿದ್ದೇ ಪವಾಡ!

ಕೊಪ್ಪಳ; ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬಸ್‌ ಚಾಲಕನ ಸಮಯಪ್ರಜ್ಞೆಯಿಂದ ಬಸ್‌ನಲ್ಲಿದ್ದ 65 ಪ್ರಯಾಣಿಕರ ಪ್ರಾಣ ಉಳಿದಿದೆ. ಸ್ವಲ್ಪ ಯಾಮಾರಿದ್ದರೂ ಹಲವರ ಪ್ರಾಣ ಹೋಗುವ ಅಪಾಯವಿತ್ತು. ಕೊಪ್ಪಳ ಬಳಿಕ ಶಹಾಪುರ ರಾಷ್ಟ್ರೀಯ ಹೆದ್ದಾರಿ ಟೋಲ್‌ ಬಳಿ ಈ ದುರ್ಘಟನೆ ಸಂಭವಿಸಿದೆ.

ಸರ್ಕಾರಿ ಬಸ್‌ ವಿಜಯಪುರದಿಂದ ಹೊಸಪೇಟೆಗೆ ತೆರಳುತ್ತಿತ್ತು. ಈ ವೇಳೆ ನಡು ರಸ್ತೆಯಲ್ಲೊ ನಿಂತಿದ್ದ ವಿಂಡ್‌ ಪವರ್‌ ಲಾರಿಗೆ ಬಸ್‌ ಡಿಕ್ಕಿ ಹೊಡೆದಿದೆ. ಬಸ್‌ ಚಾಲಕ ಸಮಯಪ್ರಜ್ಞೆಯಿಂದ ಬ್ರೇಕ್‌ ಹಾಕಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ಬಸ್‌ ವೇಗವಾಗಿ ಸಂಚಾರ ಮಾಡುತ್ತಿತ್ತು. ಲಾರಿ ಚಾಲಕ ಮುಂಜಾಗ್ರತೆ ಇಲ್ಲದೆ, ರಸ್ತೆ ನಡುವೆಯೇ ಲಾರಿಯನ್ನು ನಿಲ್ಲಿಸಿದ್ದ. ಇದರ ಅರಿವಿಲ್ಲದೇ ಬಸ್‌ ನುಗ್ಗಿದ್ದರಿಂದ ಈ ಅಪಘಾತ ಸಂಭವಿಸಿದೆ. ಬಸ್‌ ಮುಂಭಾಗ ನಜ್ಜುಗುಜ್ಜಾಗಿದೆ. ಲಾರಿಯೊಳಗೆ ಬಸ್‌ ಸಿಕ್ಕಿಕೊಂಡಿತ್ತು. ಕ್ರೇನ್‌ ತಂದು ಎರಡೂ ಬೇರ್ಪಡಿಸಲಾಗಿದೆ.

ಈ ಬಗ್ಗೆ ಮುನಿರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share Post