CrimeDistricts

ಮುಳಬಾಗಿಲು ನಗರಸಭಾ ಸದಸ್ಯನ ಬರ್ಬರ ಹತ್ಯೆ; ಬಿಗುವಿನ ವಾತಾವರಣ

ಕೋಲಾರ; ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಂದು ಬೆಳಗ್ಗೆ ಮುಳಬಾಗಿಲು ಪಟ್ಟಣದ ಗಂಗಮ್ಮನಗುಡಿ ದೇಗುಲದ ಬಾಗಿಲಿನಲ್ಲಿ ಈ ಕೃತ್ಯ ಎಸಗಲಾಗಿದೆ. ಪಟ್ಟಣದ ಮುತ್ಯಾಲಪೇಟೆಯ ಜಗನ್ಮೋಹನ್‌ ರೆಡ್ಡಿ ಅವರ ನಿವಾಸದ ಬಳಿ ಇರುವ ದೇಗುಲದ ಬಾಗಿಲು ತೆರೆಯುವ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಪ್ರೀ ಪ್ಲ್ಯಾನ್‌ ಮಾಡಿ ಈ ಕೊಲೆ ಮಾಡಿರುವ ಸಾಧ್ಯತೆ ಇದೆ. ಆರೋಪಿಗಳು ಪರಾರಿಯಾಗಿದ್ದಾರೆ. ಆದ್ರೆ, ಪೊಲೀಸರಿಗೆ ಕೆಲ ಮಹತ್ವದ ಅಂಶಗಳು ಲಭ್ಯವಾಗಿವೆ. ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್‌ ತಿಳಿಸಿದ್ದಾರೆ. ನಗರಸಭಾ ಸದಸ್ಯ ಜಗನ್ಮೊಃನ್‌ ರೆಡ್ಡಿಯವರಿಗೆ ಪತ್ನಿ ಹಾಗೂ ಹೆಣ್ಣು ಮಗುವಿದೆ. ಸತತ ಎರಡನೇ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ನಗರಸಭೆಗೆ ಆಯ್ಕೆಯಾಗಿದ್ದರು. ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರು.

Share Post