DistrictsPolitics

ಸತತ ಮಳೆ ಹಿನ್ನೆಲೆ; ಒಂದು ವಾರ ಪಂಚರತ್ನ ಯಾತ್ರೆ ಮುಂದೂಡಿಕೆ

ಮುಳಬಾಗಿಲು; ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಒಂದು ವಾರ ಪಂಚರತ್ನ ಯಾತ್ರೆಯನ್ನು ಮುಂದೂಡುತ್ತಿರುವುದಾಗಿ ಜೆಡಿಎಸ್‌ ನಾಯಕ ಕುಮಾರಸ್ವಾಮಿ ಹೇಳಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಂಚರತ್ನ ಯಾತ್ರೆ ಕೈಗೊಂಡಿದೆ. ಮುಳಬಾಗಿಲಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಡಿಕೆ ಈ ಘೋಷಣೆ ಮಾಡಿದ್ದಾರೆ.

ದೇವರ ಪ್ರಸಾದ ಹಾಗೂ ಚೆನ್ನಾಗಿ ಪೂಜೆಯೂ ನಡೆದಿದೆ. ಆದರೆ, ಮಳೆ ಹೆಚ್ಚಾಗಿ ಬರುತ್ತಿರುವುದರಿಂದ ಸಮಾವೇಶ ನಡೆಸಲು ಸಾಧ್ಯವಾಗುತ್ತಿಲ್ಲ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಕೆಲ ದಿನಗಳು ಮಳೆ ಬರಲಿದೆ. ಕಾರ್ಯಕ್ರಮ ಸರಿಯಾಗಿ ನಡೆಸಲು ಆಗುವುದಿಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಥಯಾತ್ರೆ ಮುಂದೂಡಲಾಗಿದೆ ಎಂದು ಹೆಚ್ಡಿಕೆ ತಿಳಿಸಿದ್ದಾರೆ.

ಮಳೆ ಬಂದಿರುವುದು ಪಂಚರತ್ನಕ್ಕೆ ಶುಭ ಸೂಚನೆ ಎಂದ ಕುಮಾರಸ್ವಾಮಿ, ಯಾತ್ರೆಯ ಮುಂದಿನ ದಿನಾಂಕವನ್ನು ಮೂರು ದಿನಗಳೊಳಗೆ ಚರ್ಚೆ ಮಾಡಿ ನಿಗದಿ ಮಾಡಲಾಗವುದು ಎಂದು ಹೇಳಿದ್ದಾರೆ.

Share Post