CrimeDistricts

ಕುದಿಯೋ ನೀರಿಗೆ ಖಾರದಪುಡಿ ಹಾಕಿ ಪತಿಗೆ ಎರಚಿದ ಪತ್ನಿ!

ಉಡುಪಿ; ಎಂತಹ ಕ್ರೂರಿ ಪತ್ನಿಯರಿರುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತೆ. ಯಾಕಂದ್ರೆ ಇಲ್ಲೊಬ್ಬಳು ಮಹಿಳೆ ಬಿಸಿನೀರಿಗೆ ಖಾರದ ಪುಡಿ ಹಾಕಿ ಅದನ್ನು ಪತಿಯ ಮೇಲೆ ಎರಚಿ ಕ್ರೌರ್ಯ ಮೆರೆದಿದ್ದಾಳೆ. ಉಡುಪಿಯ ಕಟಪಾಡಿಯ ಶಂಕರಪುರ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ. ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಪತ್ನಿ ಈ ಕೆಲಸ ಮಾಡಿದ್ದಾಳೆ ಎನ್ನಲಾಗಿದೆ.

ಅಫ್ರೀನ್‌ ಎಂಬಾಕೆಯೇ ಈ ಕೃತ್ಯ ಎಸಗಿದಾಕೆ. ಪತಿ ಮೊಹಮದ್‌ ಅಶ್ರಫ್‌ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅಫ್ರೀನ್‌ ಅನುಮಾನ ವ್ಯಕ್ತಪಡಿಸಿದ್ದಾಳೆ. ಇದೇ ಕಾರಣಕ್ಕೆ ಇಬ್ಬರು ನಡುವೆ ಹಲವು ದಿನಗಳಿಂದ ವೈಮನಸ್ಯ ಏರ್ಪಟ್ಟಿತ್ತು. ಇದೇ ಅಸಮಾಧಾನದಿಂದ ಅಫ್ರೀನ್‌ ಕುದಿಯೋ ನೀರಿಗೆ ಖಾರದಪುಡಿ ಹಾಕಿ ಪತಿ ಮೊಹಮದ್‌ ಅಶ್ರಫ್‌ ಮೇಲೆ ಎರಚಿದ್ದಾಳೆ.

ಕಳೆದ ಅಕ್ಟೋಬರ್‌ ತಿಂಗಳಲ್ಲಿ ಇವರಿಬ್ಬರ ಮದುವೆಯಾಗಿತ್ತು. ಇಬ್ಬರೂ ಅಫ್ರೀನ್‌ ಮನೆಯಲ್ಲೇ ಇದ್ದರು. ಆದ್ರೆ ಗಂಡ ಬೇರೆ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನೋ ಅನುಮಾನ ಪತ್ನಿಗೆ ಮೂಡಿತ್ತು. ಹೀಗಾಗಿ ಆಗಾಗ ಜಗಳ ನಡೆಯುತ್ತಿತ್ತು.  ಇಂದು ಪತಿ ಬಾತ್‌ರೂಮ್‌ನಿಂದ ಹೊರಬರುವಾಗ ಖಾರದಪುಡಿ ಮಿಶ್ರಿತ ಕುದಿಯುವ ನೀರನ್ನು ಆತನ ಮೇಲೆ ಎರಚಿದ್ದಾಳೆ. ಇದೀಗ ಈ ಬಗ್ಗೆ ಪತಿ ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

Share Post