DistrictsPolitics

ಶ್ರೀಕಾಂತ್‌ ಪೂಜಾರಿ ಬಂಧನದ ಹಿಂದೆ ಪ್ರಹ್ಲಾದ್‌ ಜೋಷಿ ಕೈವಾಡವಿದೆ; ಶೆಟ್ಟರ್‌ ಆರೋಪ

ಹುಬ್ಬಳ್ಳಿ; ಕರಸೇವಕ ಶ್ರೀಕಾಂತ್‌ ಪೂಜಾರಿ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಕೈವಾಡವಿದೆ ಎಂದು ಕಾಂಗ್ರೆಸ್‌ ನಾಯಕ ಜಗದೀಶ್‌ ಶೆಟ್ಟರ್‌ ಗಂಭೀರ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಇದ್ದಾಗ ಈ ಕೇಸ್‌ ವಾಪಸ್‌ ಪಡೆಯಬೇಕಿತ್ತು. ಆದ್ರೆ ಈ ಕೇಸ್‌ ವಾಪಸ್‌ ಪಡೆಯದಿದ್ದರ ಹಿಂದೆ ಪ್ರಹ್ಲಾದ್‌ ಜೋಷಿ ಕೈವಾಡ ಇದೆ ಎಂದು ಆರೋಪಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ 30 ವರ್ಷಗಳ ಹಿಂದಿನ ಈ ಕೇಸ್‌ ವಾಪಸ್‌ ಪಡೆಯಲು ಸಿದ್ಧನಿದ್ದೆ. ಆದ್ರೆ ಅದು ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಬಿಜೆಪಿ ಸರ್ಕಾರ ಏಳೆಂಟು ವರ್ಷ ಆಡಳಿತ ಮಾಡಿದೆ. ಈ ವೇಳೆ ಈ ಕೇಸ್‌ನ್ನು ಪರಿಷ್ಕರಣೆ ಮಾಡಿ ವಾಪಸ್‌ ಪಡೆಯೋದಕ್ಕೆ ಅವಕಾಶ ಇದ್ದೇ ಇತ್ತು. ಆದ್ರೆ, ಅದು ಆಗದಿದ್ದುದರ ಹಿಂದೆ ಪ್ರಹ್ಲಾದ್‌ ಜೋಷಿ ಇದ್ಧಾರೆ ಎಂದು ಶೆಟ್ಟರ್‌ ಆರೋಪಿಸಿದ್ದಾರೆ.

ಬಿಜೆಪಿ ನಾಯಕರು ಈಗ ಹೋರಾಟ ಮಾಡುತ್ತಿದ್ದಾರೆ. ಆದ್ರೆ ಅಧಿಕಾರದಲ್ಲಿದ್ದಾಗ ಈ ಕೇಸ್‌ ಯಾಕೆ ವಾಪಸ್‌ ಪಡೆಯಲಿಲ್ಲ ಎಂದೂ ಜಗದೀಶ್‌ ಶೆಟ್ಟರ್‌ ಪ್ರಶ್ನೆ ಮಾಡಿದ್ದಾರೆ.

 

Share Post