DistrictsPolitics

ಡಿವೈಡರ್‌ ಹತ್ತಿಸಿ ಸಿಎಂ ಕಾರಿಗೆ ಅಡ್ಡ ಬಂದ ಜನಾರ್ದನರೆಡ್ಡಿ ಕಾರು!

ಕೊಪ್ಪಳ; ಕೊಪ್ಪಳದಲ್ಲಿ ಕಳೆದ ರಾತ್ರಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.. ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜನಾರ್ದನರೆಡ್ಡಿ ಕಾರು ಡಿವೈಡರ್‌ ಹತ್ತಿಸಿ ರೋಡ್‌ ಕ್ರಾಸ್‌ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಕಾರಿಗೆ ಅಡ್ಡ ಬಂದಿದೆ. ಇದರಿಂದ ಗೊಂದಲದ ವಾತಾವರಣ ಉಂಟಾಗಿತ್ತು..
ಸಿಎಂ ಸಿದ್ದರಾಮಯ್ಯ ಅವರಿದ್ದ ಕಾರು ರಾಯಚೂರಿನಿಂದ ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು.. ಇದೇ ವೇಳೆ ಜನಾರ್ದನರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ಸಿಎಂ ಕಾರಿಗೆ ವಿರುದ್ಧ‌ ದಿಕ್ಕಿನಲ್ಲಿ ಪ್ರಯಾಣ ಮಾಡಿದೆ.. ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದ ಸಿಬಿಎಸ್‌ ವೃತ್ತದಲ್ಲಿ ಈ ಘಟನೆ ನಡೆದಿದೆ..
ಸಿಎಂ ಸಿದ್ದರಾಮಯ್ಯ ಅವರು ಬರುತ್ತಿರುವುದರಿಂದ ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು.. ಇದರಿಂದಾಗಿ ಅಕ್ಕಪಕ್ಕದ ರಸ್ತೆಗಳಲ್ಲಿ ಸುಮಾರು 20 ನಿಮಿಷಗಳ ಕಾಲ ಟ್ರಾಫಿಕ್‌ ಜಾಮ್‌ ಆಗಿತ್ತು.. ಟ್ರಾಫಿಕ್‌ನಲ್ಲಿ ಸಿಲುಕಿದ್ದ ಶಾಸಕ ಜನಾರ್ದನರೆಡ್ಡಿ ಕಾರು ಇದ್ದಕ್ಕಿದ್ದಂತೆ ಡಿವೈಡರ್‌ ದಾಟಿ ಸಿದ್ದರಾಮಯ್ಯ ಅವರ ಕಾರಿಗೆ ವಿರುದ್ಧವಾಗಿ ಹೋಗಿದೆ.. ಸ್ವಲ್ಪ ವ್ಯತ್ಯಾಸವಾಗಿದ್ದರೂ ಎಡವಟ್ಟಾಗುತ್ತಿತ್ತು.. ಈ ಕಾರಣದಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು..

Share Post