DistrictsPolitics

ನಮ್ಮ ಸರ್ಕಾರ ಬಂದರೆ ಭದ್ರಾವತಿ VISL ಫ್ಯಾಕ್ಟರಿ ಉಳಿಸಿಕೊಳ್ಳುತ್ತೇವೆ; ಡಿಕೆಶಿ

ಶಿವಮೊಗ್ಗ; ನಮ್ಮ ಸರ್ಕಾರ ಬಂದರೆ ಭದ್ರಾವತಿ VISL ಫ್ಯಾಕ್ಟರಿ ಉಳಿಸಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಭದ್ರಾವತಿಯಲ್ಲಿ ಜನಧ್ವನಿ ಯಾತ್ರೆಯ ಭಾಗವಾಗಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ರಾಜ್ಯದಲ್ಲಿ ಬಿಜೆಪಿ ಅಡಳಿತ ಡಬಲ್ ಇಂಜಿನ್ ಸರ್ಕಾರ ಇದೆ. ಭದ್ರಾವತಿ ಶಿವಮೊಗ್ಗ ದಲ್ಲಿ ಕಾರ್ಮಿಕರು, ರೈತರು ವ್ಯಾಪರಸ್ಥರು ಬದುಕಲು ಕಷ್ಟ ಪರಿಸ್ಥಿತಿ ಇದೆ. ನಾವು ಎಲ್ಲ ಕಾರ್ಖಾನೆಯ ನ್ನು ರಾಷ್ಟ್ರೀಕರಣ ಮಾಡಿದ್ರೆ ಇವರು ಖಾಸಗೀಕರಣ ಮಾಡ್ತಾ ಇದ್ದಾರೆ. ಇಲ್ಲಿ ಖಾಸಗಿಯವರು ಬರದಿದ್ದ ಕಾರಣಕ್ಕೆ ಫ್ಯಾಕ್ಟರಿ ಮುಚ್ಚಲು ಮುಂದಾಗಿದ್ದಾರೆ. ಈ ಎರಡು ಕಾರ್ಖಾನೆ ಸರ್ಕಾರದ ಸುಪರ್ದಿಯಲ್ಲಿರಬೇಕು ಇವುಗಳನ್ನ ಮುಚ್ಚಬಾರದು ಎಂದು ಡಿಕೆಶಿ ಹೇಳಿದ್ದಾರೆ.

 

Share Post