DistrictsPolitics

ಮೋದಿ ಮತ್ತೆ ಪ್ರಧಾನಿಯಾದರೆ ತಮ್ಮ ದೇಗುಲ ತಾವೇ ಕಟ್ಟಿಕೊಳ್ತಾರೆ; ಸಚಿವ ಶಿವರಾಜ ತಂಗಡಗಿ

ಕೊಪ್ಪಳ; ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ತಮ್ಮ ದೇವಸ್ಥಾನವನ್ನು ತಾವೇ ಕಟ್ಟಿಕೊಳ್ಳುತ್ತಾರೆ. ಅವರ ಇತ್ತೀಚಿನ ಮಾತುಗಳನ್ನು ನೋಡಿದರೆ ಹಾಗೇ ಅನುಸುತ್ತದೆ ಅಂತ ಸಚಿವ ಶಿವರಾಜ ತಂಗಡಗಿ ಲೇವಡಿ ಮಾಡಿದ್ದಾರೆ.. ಕೊಪ್ಪಳ ಕಾರಟಗಿಯಲ್ಲಿ ಮಾತನಾಡಿದ ಅವರು, ರಾಮನ ದೇಗುಲ ಆಯ್ತು, ಇನ್ನು ನನ್ನ ದೇಗುಲ ಅಂತ ಮೋದಿಯವರು ತಮ್ಮ ದೇಗುಲವನ್ನೇ ಕಟ್ಟಿಕೊಳ್ತಾರೇನೋ ಎಂದಿದ್ದಾರೆ..

ಪ್ರಧಾನಿ ಮೋದಿಯವರ ಇತ್ತೀಚಿನ ಹೇಳಿಕೆಗಳು ನೋಡಿದರೆ ಹಾಗೆಯೇ ಅನಿಸುತ್ತಿದೆ.. ನನ್ನನ್ನು ದೇವರೇ ಇಲ್ಲಿ ಕಳುಹಿಸಿದ್ದಾನೆ ಎಂದು ಮೋದಿ ಹೇಳಿಕೊಳ್ಳುತ್ತಿದ್ದಾರೆ.. ಹೀಗಾಗಿ ಮೋದಿಗೆ ಮತ್ತೊಮ್ಮೆ ಅಧಿಕಾರ ಕೊಟ್ಟರೆ ಅವರ ದೇಗುಲ ಕಟ್ಟುವ ಪರಿಸ್ಥಿತಿ ಉಂಟಾಗಬಹುದು.. ಪ್ರತಿ ಊರಿನಲ್ಲೂ ಪ್ರಧಾನಿ ಮೋದಿ ದೇಗುಲ ಕಟ್ಟಿ ಎನ್ನುವ ಕಾಲವೂ ಬರಬಹುದೇನೋ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ..

ಪುರಿಜಗನ್ನಾಥ ದೇವರೇ ಮೋದಿ ಭಕ್ತರು ಅಂತಾರೆ, ಎಲ್ಲಿಗೆ ಬಂದಿದೆ ಪರಿಸ್ಥಿತಿ ನೋಡಿ ಎಂದ ಸಚಿವರು, ನಾವು ಜನಪ್ರತಿನಿಧಿಗಳು, ದೇವರಾಗೋಕಾಗತ್ತಾ ಎಂದು ಪ್ರಶ್ನಿಸಿದ್ದಾರೆ.

Share Post