CrimeDistricts

ಅತಿವೇಗದ ಚಾಲನೆ ತಂದ ಆಪತ್ತು; ಬದುಕುಳಿದಿದ್ದೇ ಪವಾಡ!

ತುಮಕೂರು; ಅತಿ ವೇಗದ ಚಾಲನೆಯಿಂದ ಪ್ರಾಣಕ್ಕೇ ಕುತ್ತಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೂ ಕೆಲ ಯುವಕರು ಕ್ರೇಜ್‌ಗಾಗಿ ಅತಿವೇಗವಾಗಿ ಬೈಕ್‌ ಓಡಿಸಿ ಅಪಾಯಕ್ಕೆ ಸಿಲುಕುತ್ತಾರೆ. ಇಲ್ಲೂ ಕೂಡಾ ಅದೇ ಆಗಿರೋದು. ಆದ್ರೆ ಬೈಕ್‌ನಲ್ಲಿದ್ದವರು ಇಬ್ಬರೂ ಹೆಲ್ಮೆಟ್‌ ಧರಿಸಿದ್ದರಿಂದ ಅವರ ಪ್ರಾಣ ಉಳಿದಿದೆ. 

ಈ ಘಟನೆ ನಡೆದಿರೋದು ತುಮಕೂರು ಜಿಲ್ಲೆ ಕುಣಿಗಲ್‌ ಪಟ್ಟಣದಲ್ಲಿ.. ಈ ದೃಶ್ಯ ಕೂಡಾ ಸೆರೆಯಾಗಿದೆ. ಮತ್ತೊಬ್ಬ ಬೈಕ್‌ ಸವಾರನು ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಅಪಘಾತದಲ್ಲಿ ಬೈಕ್‌ ಸವಾರರು ಬದುಕುಳಿದ್ದಿದ್ದೇ ಒಂದು ಪವಾಡ ಎನ್ನಲಾಗುತ್ತಿದೆ. ಇದು ಯಾವ ಸಿನಿಮಾದ ಸಾಹಸ ದೃಶ್ಯಕ್ಕೂ ಕಡಿಮೆ ಇಲ್ಲ.

ಅತಿವೇಗವಾದ ಬಂದ ಬೈಕ್‌ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್‌ ಸವಾರರು ಬೆಂಗಳೂರಿನಿಂದ ಕುಣಿಗಲ್‌ಗೆ ಬರುತ್ತಿದ್ದರು. ಅತಿಯಾದ ವೇಗದಲ್ಲಿ ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share Post